ಬೀದರ್:ಬೀದರ್ ಉತ್ತರ ವಿಧಾನಸಭೆ ಕ್ಷೇತ್ರದ ವಿವಿಧ ಯೋಜನೆ ಅಡಿಯಲ್ಲಿ ಫಲಾನುಭವಿಗಳಿಗೆ ಶಾಸಕ ರಹಿಂಖಾನ್ ಅವರು 74 ಲಕ್ಷ ರೂ ಮೌಲ್ಯದ ಚೆಕ್ಗಳನ್ನು ಹಸ್ತಾಂತರಿಸಿದರು.
74 ಲಕ್ಷ ರೂ. ಮೌಲ್ಯದ ಚೆಕ್ಗಳನ್ನು ವಿತರಿಸಿದ ಶಾಸಕ ರಹಿಂಖಾನ್ - Bidar latest news
ಶಾಸಕ ರಹಿಂಖಾನ್ ಅವರು ಗಂಗಾಕಲ್ಯಾಣ ನೀರಾವರಿ ಯೋಜನೆ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಸಾಲದ ಚೆಕ್ಗಳನ್ನು ವಿತರಣೆ ಮಾಡಿದರು.
![74 ಲಕ್ಷ ರೂ. ಮೌಲ್ಯದ ಚೆಕ್ಗಳನ್ನು ವಿತರಿಸಿದ ಶಾಸಕ ರಹಿಂಖಾನ್ Raheem Khan](https://etvbharatimages.akamaized.net/etvbharat/prod-images/768-512-05:02:25:1597577545-kn-bdr-02-16-cheqdistribution-7203280-av-0-16082020170153-1608f-1597577513-949.jpg)
Raheem Khan
ನಗರದ ಚಿದ್ರಿ ರಸ್ತೆಯಲ್ಲಿರುವ ಶಾಸಕರ ಕಚೇರಿಯಲ್ಲಿ ಗಂಗಾಕಲ್ಯಾಣ ನೀರಾವರಿ ಯೋಜನೆ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಸಾಲದ ಚೆಕ್ಗಳನ್ನು ವಿತರಣೆ ಮಾಡಿದರು.
ಈ ವೇಳೆ ಮಾತನಾಡಿದ ಅವರು, ಕೊರೊನಾ ಕಂಟಕದ ನಡುವೆ ಸಂಕಷ್ಟದಲ್ಲಿರುವ ಜನರಿಗೆ ಅದರಲ್ಲೂ ವಿಶೇಷವಾಗಿ ಸಣ್ಣ ವ್ಯಾಪಾರಿಗಳ ಬದುಕು ದುಸ್ತರವಾಗಿದೆ. ಈ ನಡುವೆ ಸರ್ಕಾರ ನೀಡುವ ಸಾಲದ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕಾಗಿದೆ. ಅಲ್ಲದೆ ಬಡ ರೈತರು ತಮ್ಮ ಗದ್ದೆಯಲ್ಲಿ ಕೊಳವೆ ಬಾವಿ ತೊಡುವ ಮೂಲಕ ವಿದ್ಯುತ್ ಸಂಪರ್ಕ, ಮೋಟಾರ್ ವ್ಯವಸ್ಥೆ ಕೂಡ ಸರ್ಕಾರ ಮಾಡಿಕೊಟ್ಟಿರುವುದು ರೈತರನ್ನು ಬಲಪಡಿಸುವ ಕಾರ್ಯವಾಗಿದೆ ಎಂದರು.