ಕರ್ನಾಟಕ

karnataka

ETV Bharat / state

ಕಾಂಗ್ರೆಸ್​ ವಿರುದ್ಧ ಮೋದಿ ದಲಿತ- ಲಿಂಗಾಯತ ಅಸ್ತ್ರ ಪ್ರಯೋಗ.. ಬೀದರ್​ನಲ್ಲಿ ಮೋದಿ ಹೇಳಿದ್ದೇನು ಗೊತ್ತಾ?

ರಾಜ್ಯದ ಅಭಿವೃದ್ದಿಯಾಗಬೇಕಾದರೆ ಡಬಲ್​ ಇಂಜಿನ ಸರ್ಕಾರದ ಅವಶ್ಯಕತೆ ಇದೆ ಎಂದು ಪ್ರಧಾನಿ ಮೋದಿ ಹೇಳಿದರು.

By

Published : Apr 29, 2023, 12:27 PM IST

Updated : Apr 29, 2023, 1:25 PM IST

Etv Bharat
Etv Bharat

ಬೀದರ್​: ಕಾಂಗ್ರೆಸ್ ನವರು ಭಾರತೀಯ ಸಂವಿಧಾನದ ಶಿಲ್ಪಿ ಡಾ. ಬಿ ಆರ್​ ಅಂಬೇಡ್ಕರ ಅವರನ್ನು "ರಾಕ್ಷಸ, ರಾಷ್ಟ್ರ ದ್ರೋಹಿ" ಎಂದು ನಿಂದಿಸಿದ್ದರು ಅಲ್ಲದೇ ಕಾಂಗ್ರೆಸ್​ ಪಕ್ಷ ಲಿಂಗಾಯತ ಸಮುದಾಯವನ್ನು ಕಳ್ಳರು ಎನ್ನುವ ಮೂಲಕ ಅವಮಾನಿಸಿದೆ ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದರು.

ವಿಧಾನಸಭೆ ಚುನಾವಣೆ ಹಿನ್ನೆಲೆ ಎರಡು ದಿನಗಳ ಕಾಲ ರಾಜ್ಯ ಪ್ರವಾಸ ಕೈಗೊಂಡಿರುವ ಮೋದಿ ಇಂದು ಬೀದರ್​ನ ಹುಮ್ನಾಬಾದ್​ನಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಮೊದಲಿಗೆ ಕನ್ನಡದಲ್ಲಿ ಮಾತನ್ನು ಆರಂಭಿಸಿದ ಪ್ರಧಾನಿ ಬಸವೇಶ್ವರ ಮತ್ತು ಶಿವಶರಣರ ಭೂಮಿಗೆ ನಮಸ್ಕಾರ ಎಂದು ಮಾತು ಆರಂಭಿಸಿದರು. ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಕಾಂಗ್ರೆಸ್​ ಅವಮಾನಿಸಿರುವ ಬಗ್ಗೆ ಅಂಬೇಡ್ಕರ ಅವರೇ ಸಭೆಯೊಂದರಲ್ಲಿ ಎಲ್ಲವನ್ನೂ ವಿವರಿಸಿದ್ದರು ಎಂದರು.

ಮುಂದು ವರೆದು ಮಾತನಾಡಿ, ಡಬಲ್​ ಇಂಜಿನ ಸರ್ಕಾರ ಇದ್ದರೆ ರಾಜ್ಯ ಹೆಚ್ಚು ಅಭಿವೃದ್ಧಿ ಹೊಂದಲಿದೆ ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದರು. ಕರ್ನಾಟಕದ ಈ ಚುನಾವಣೆ ಕೇವಲ 5 ವರ್ಷದ ಸರ್ಕಾರ ರಚನೆ ಮಾಡುವ ಚುನಾವಣೆಯಾಗಿಲ್ಲ. ಬದಲಿಗೆ ಈ ಬಾರಿಯ ಚುನಾವಣೆ ಕರ್ನಾಟಕವನ್ನು ದೇಶದಲ್ಲೇ ನಂಬರ್​ 1 ರಾಜ್ಯ ಮಾಡಲಿರುವ ಚುನಾವಣೆಯಾಗಿದೆ. ಈ ಹಿನ್ನೆಲೆ ಕರ್ನಾಟಕ ರಾಜ್ಯ ದೇಶದ ನಂ1 ರಾಜ್ಯವಾಗಲು ಡಬಲ್​ ಇಂಜಿನ ಸರ್ಕಾರದ ಅವಶ್ಯಕತೆಯಿದೆ ಎಂದು ಮೋದಿ ಬಲವಾಗಿ ಪ್ರತಿಪಾದನೆ ಮಾಡಿದ್ದು, ತಮ್ಮ ಗುರಿಯನ್ನ ರಾಜ್ಯದ ಜನರ ಮುಂದಿಟ್ಟಿದ್ದಾರೆ.

ಡಬಲ್​ ಇಂಜಿನ ಸರ್ಕಾರ ಇದ್ದರೆ ರಾಜ್ಯ ಹೆಚ್ಚು ಅಭಿವೃದ್ಧಿ ಹೊಂದಲಿದೆ ಎಂದರು. ಮುಂದುವರೆದು ಮಾತನಾಡಿದ ಅವರು ರಾಜ್ಯದಲ್ಲಿ ಈಗಾಗಲೇ ಎಕ್ಸ್​ಪ್ರೆಸ್​ ವೇ, ವಂದೇ ಭಾರತ್​ ರೈಲು ಸೇರಿದಂತೆ ಹಲವಾರು ಅಭಿವೃದ್ಧಿ ಕೆಲಸಗಳಾಗಿ. ಬೀದರನಲ್ಲೂ ಹಲವಾರು ಅಭಿವೃದ್ಧಿ ಕಾರ್ಯಗಳಾಗಿವೆ. ಈಗಾಗಲೇ ರಾಜ್ಯದ ಜನರು ಇಡೀ ದೇಶಕ್ಕೆ ಸಂದೇಶ ಸಾರಿದ್ದು, ಈ ಬಾರಿಯ ತಮ್ಮ ನಿರ್ಧಾರ ಸ್ಪಷ್ಟ ಬಹುಮತದ ಬಿಜೆಪಿ ಸರ್ಕಾರ ಎಂದು ಮೋದಿ ಹೇಳಿದರು.

ಜನರು ಕರ್ನಾಟಕ ಯಾವ ರೀತಿ ಇರಬೇಕು ಎಂದು ನಿರೀಕ್ಷಿಸಿದ್ದರೂ ಅದೇ ರೀತಿಯ ಕರ್ನಾಟಕ ನಿರ್ಮಾಣವಾಗುತ್ತಿದೆ. ಜನರು ಹೈವೇ ಎಕ್ಸ್​​ಪ್ರೆಸ್​ ವೇ ಗಳಂತಹ ರಸ್ತೆಗಗಳ ಬಗ್ಗೆ ನಿರೀಕ್ಷೆ ಮಾಡಿದ್ದರು, ಅಲ್ಲದೇ ವಂದೇ ಭಾರತ್​ ರೈಲುಗಳ ಸಂಚಾರ ಸೇರಿದಂತೆ ಹತ್ತು ಹಲವು ಬಗೆಯ ನಿರೀಕ್ಷೆಗಳನ್ನು ಜನರು ಹೊಂದಿದ್ದರು. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ದಿನದಿಂದ ಈ ವರೆಗೂ ಜನರು ನಿರೀಕ್ಷೆ ಮಾಡಿದ್ದ ಎಲ್ಲ ಕಾರ್ಯಗಳು ಕರ್ನಾಟಕದಲ್ಲಿ ಆಗಿವೆ. ಅವರ ಕಂಡ ಕನಸನ್ನು ನಿಜ ಗೊಳಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ.

ಇದನ್ನೂ ಓದಿ:ಕೂತುಹಲ ಮೂಡಿಸುತ್ತಿದೆ ದಾವಣಗೆರೆ ದಕ್ಷಿಣ.. ಶಿವಶಂಕರಪ್ಪ ಅವರಿಗೆ ಟಕ್ಕರ್​ ಕೊಡಲು ಬಿಜೆಪಿ ರಣತಂತ್ರ!

ಈ ಹಿನ್ನೆಲೆ ಕರ್ನಾಟಕ ನಂ 1 ರಾಜ್ಯ ಆಗಿರಲು ರಾಜ್ಯದಲ್ಲಿ ಡಬಲ್​ ಇಂಜಿನ ಸರ್ಕಾರದ ಅವಶ್ಯಕತೆ ಇದೆ. ರಾಜ್ಯಕ್ಕೆ ಡಬಲ್​ ಎಂಜಿನ ಬಲ ಇದ್ದರೆ ರಾಜ್ಯದ ಅಭಿವೃದ್ಧಿಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದರು. ಇನ್ನು ಮೋದಿ ವಿಷದ ಹಾವು ಎಂದು ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿ, ಜನಾಶೀರ್ವಾದದಿಂದ ಕಾಂಗ್ರೆಸ್​ ಬೈಗಳು ಮಣ್ಣಲ್ಲಿ ಮಣ್ಣಾಗುತ್ತವೆ. ನನ್ನ ಬೈಯುವುದರಲ್ಲೇ ಕಾಂಗ್ರೆಸ್​ ಸಮಯ ವ್ಯರ್ಥ ಮಾಡುತ್ತಿದೆ. ಅಭಿವೃದ್ಧಿ ಕೆಲಸ ಮಾಡುವವರನ್ನು ಬೈಯುವುದು ಕಾಂಗ್ರೆಸ್​​ನವರ ಚಾಳಿ. ಕಾಂಗ್ರೆಸ್​ ನವರು ಬೈದಾಗೆಲ್ಲ ಅವರಿಗೆ ತಕ್ಕ ಶಿಕ್ಷೆಯಾಗಿದೆ. ನೀವು ಬೈಯುತ್ತಿರಿ ನಾನು ಕೆಲಸ ಮಾಡುತ್ತಿರುವೆ ಎಂದು ತಿರುಗೇಟು ನೀಡಿದರು.

ಇದನ್ನೂ ಓದಿ:ಏ.30ರಂದು ಸುಳ್ಯಕ್ಕೆ ಜೆಪಿ ನಡ್ಡಾ ಆಗಮನ.. ಪ್ರವೀಣ್ ನೆಟ್ಟಾರು ಮನೆಗೂ ಭೇಟಿ ಸಾಧ್ಯತೆ!

Last Updated : Apr 29, 2023, 1:25 PM IST

ABOUT THE AUTHOR

...view details