ಕರ್ನಾಟಕ

karnataka

ಬೀದರ್ ಜಿಲ್ಲೆಯ ಗೊಗ್ಗವ್ವೆ ಕೆರೆಗೆ ಮರುಜೀವ: ಪ್ರಧಾನಿಯಿಂದ ಗ್ರಾಮಸ್ಥರಿಗೆ ಶಹಬ್ಬಾಸ್​ ಗಿರಿ

By

Published : Mar 23, 2021, 10:37 AM IST

Updated : Mar 23, 2021, 12:47 PM IST

ಲಾಕ್​​ಡೌನ್ ವೇಳೆ ಉದ್ಯೋಗ ಖಾತ್ರಿ ಯೋಜನೆಯಡಿ 10 ಲಕ್ಷ ರೂಪಾಯಿ ವೆಚ್ಚದಲ್ಲಿ, 1.5 ಎಕರೆ ವಿಸ್ತೀರ್ಣದ ಕೆರೆಗೆ ಪುನರುಜ್ಜೀವನ ನೀಡಲಾಗಿತ್ತು. ವಾಕಿಂಗ್ ಪಾತ್, ಉದ್ಯಾನ, ಬೋಟಿಂಗ್ ಮೂಲಕ ಈ ಸ್ಥಳವನ್ನ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ. ಈ ಹಿನ್ನೆಲೆ ಈ ಗ್ರಾಮ ಪಂಚಾಯತ್​ ಸಂವಾದಕ್ಕೆ ಆಯ್ಕೆಯಾಗಿದ್ದು ಊರಿಗೆ ಹೆಮ್ಮೆ ತಂದಿದೆ.

pm-modi-praises-bidar-village-for-management-water-resource
ಪ್ರಧಾನಿ ಮೋದಿಯಿಂದ ಗ್ರಾಮಸ್ಥರಿಗೆ ಶಹಬ್ಬಾಸ ಗಿರಿ

ಬೀದರ್: ವಿಶ್ವ ಜಲ ಸಂರಕ್ಷಣಾ ದಿನದ ಹಿನ್ನೆಲೆಯಲ್ಲಿ ಕೆರೆಗಳಿಗೆ ಮರುಜೀವ ನೀಡಿರುವ ಜಿಲ್ಲೆಯ ಔರಾದ್ ತಾಲೂಕಿನ ಧೂಪತ್ ಮಹಾಗಾಂವ್ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀನಿವಾಸ್, ಪ್ರಧಾನಮಂತ್ರಿ ಮೋದಿ ಜೊತೆ ಸಂವಾದ ನಡೆಸಿದರು.

ದೇಶದ ಐದು ಗ್ರಾಮ ಪಂಚಾಯತ್​ಗಳ ಪೈಕಿ ಕರ್ನಾಟಕದ ಏಕೈಕ ಗ್ರಾಮ ಪಂಚಾಯತ್ ಅಧ್ಯಕ್ಷಕರಿಗೆ ಆಹ್ವಾನ ಬಂದಿತ್ತು. ಬೀದರ್ ಜಿಲ್ಲೆ ಔರಾದ್ ತಾಲೂಕಿನ ಧೂಪತ್ ಮಹಾಗಾಂವ್ ಗ್ರಾಮ ಪಂಚಾಯತ್​ ಅಧ್ಯಕ್ಷ ಶ್ರೀನಿವಾಸ ಪ್ರಧಾನಿ ಮೋದಿ ಜೊತೆ ಸಂವಾದ ನಡೆಸಿದರು. 12ನೇ ಶತಮಾನದ ಗೊಗ್ಗವ್ವೆ ಕೆರೆಗೆ ಮರುಜೀವ ನೀಡಿದ ವಿಷಯದ ಮೇಲೆ ಪ್ರಧಾನಿ ಜೊತೆ ಶ್ರೀನಿವಾಸ್​ ಚರ್ಚೆ ನಡೆಸಿದರು. ಜಲ ಸಂರಕ್ಷಣೆ ಬಗ್ಗೆ ಪ್ರಧಾನಿಗೆ ಗ್ರಾಮ ಪಂಚಾಯತ್​ ಕೈಗೊಂಡ ಕ್ರಮ ವಹಿಸಿದ ಶ್ರಮದ ಬಗ್ಗೆ ವಿವರಣೆ ನೀಡಿದರು.

ಪ್ರಧಾನಿಯಿಂದ ಗ್ರಾಮಸ್ಥರಿಗೆ ಶಹಬ್ಬಾಸ್​ ಗಿರಿ

ಲಾಕ್​​ಡೌನ್ ವೇಳೆ ಉದ್ಯೋಗ ಖಾತ್ರಿ ಯೋಜನೆಯಡಿ 10 ಲಕ್ಷ ರೂಪಾಯಿ ವೆಚ್ಚದಲ್ಲಿ, 1.5 ಎಕರೆ ವಿಸ್ತೀರ್ಣದ ಕೆರೆಗೆ ಪುನರುಜ್ಜೀವನ ನೀಡಲಾಗಿತ್ತು. ವಾಕಿಂಗ್ ಪಾತ್, ಉದ್ಯಾನ, ಬೋಟಿಂಗ್ ಮೂಲಕ ಈ ಸ್ಥಳವನ್ನ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ. ಈ ಹಿನ್ನೆಲೆ ಈ ಗ್ರಾಮ ಪಂಚಾಯತ್​ ಸಂವಾದಕ್ಕೆ ಆಯ್ಕೆಯಾಗಿದ್ದು ಊರಿಗೆ ಹೆಮ್ಮೆ ತಂದಿದೆ.

ಬೀದರ್​ನ ಡಿಸಿ ಕಚೇರಿಯಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಶ್ರೀನಿವಾಸ್​ ಐದು ನಿಮಿಷಗಳ ಕಾಲ ಪ್ರಧಾನಿ ಮೋದಿ ಜೊತೆ ಐತಿಹಾಸಿಕ ಕೆರೆಯ ಪುನರುಜ್ಜೀವನದ ಬಗ್ಗೆ ಮಾತನಾಡಿದರು. ನೀರಿನ ಸಂರಕ್ಷಣೆ ಮಾಡಿದ ಗ್ರಾಮ ಪಂಚಾಯತ್​ ಕಾರ್ಯವನ್ನ ಮೆಚ್ಚಿದ ಮೋದಿ ಧನ್ಯವಾದಗಳನ್ನು ತಿಳಿಸಿ ಅಧ್ಯಕ್ಷ ಶ್ರೀನಿವಾಸ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದರು.

ಓದಿ : ಆ್ಯಂಬುಲೆನ್ಸ್​ನಲ್ಲೇ ಅವಳಿ ಗಂಡು ಮಕ್ಕಳಿಗೆ ಜನ್ಮ: ತಾಯಿ ಮಕ್ಕಳು ಸುರಕ್ಷಿತ

ಇನ್ನು ಈ ಬಗ್ಗೆ ಮಾತನಾಡಿದ ಶ್ರೀನಿವಾಸ ಮೋದಿ ಜೊತೆ ಸಂವಾದ ನಡೆಸಿದ್ದು ತಮಗೆ ತುಂಬಾ ಖುಷಿ ಕೊಟ್ಟಿದೆ ಎಂದರು. ಮುಂದೆಯೂ ಇದೇ ರೀತಿ ಕೆಲಸ ಮಾಡುತ್ತೇವೆ ಎಂದು ಪ್ರಧಾನಿಗೆ ತಿಳಿಸಿದ್ದಾಗಿ ಶ್ರೀನಿವಾಸ್​ ಇದೇ ವೇಳೆ ಹೇಳಿದರು.

Last Updated : Mar 23, 2021, 12:47 PM IST

ABOUT THE AUTHOR

...view details