ಬೀದರ್:ಕತ್ತು ಕೊಯ್ದು ಯುವಕನೊಬ್ಬನನ್ನು ಭೀಕರವಾಗಿ ಕೊಲೆಗೈದ ಘಟನೆ ಬೀದರ್ ಜಿಲ್ಲೆಯ ಚಿಟಗುಪ್ಪ ತಾಲೂಕಿನ ದೇವಗಿರಿ ತಾಂಡದಲ್ಲಿ ನಡೆದಿದೆ. 30 ವರ್ಷದ ತಾರಾಸಿಂಗ್ ಪವಾರ್ ಮೃತ ದುರ್ವೈವಿ. ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹತ್ಯೆ ಮಾಡಿದ್ದಾರೆ.
ಬೀದರ್ನಲ್ಲಿ ಕತ್ತು ಕೊಯ್ದು ಯುವಕನ ಬರ್ಬರ ಹತ್ಯೆ; ತಾಯಿ ಜೊತೆ ಜಗಳವೇ ಕಾರಣ? - ಬೀದರ್ ಭೀಕರ ಕೊಲೆ
ಕುಡಿದು ತಾಯಿ ಜೊತೆ ಜಗಳವಾಡುತ್ತಿದ್ದ ವ್ಯಕ್ತಿಯೊಬ್ಬ ನಿನ್ನೆ ರಾತ್ರಿ ಕೊಲೆಯಾಗಿದ್ದಾನೆ.
![ಬೀದರ್ನಲ್ಲಿ ಕತ್ತು ಕೊಯ್ದು ಯುವಕನ ಬರ್ಬರ ಹತ್ಯೆ; ತಾಯಿ ಜೊತೆ ಜಗಳವೇ ಕಾರಣ? murder of a young man in Bidar](https://etvbharatimages.akamaized.net/etvbharat/prod-images/768-512-16692673-thumbnail-3x2-bng.jpeg)
ಬೀದರ್ನಲ್ಲಿ ಕತ್ತು ಕೊಯ್ದು ಬರ್ಬರ ಹತ್ಯೆ
ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ ಕುಡಿದು ಬಂದು ಪ್ರತಿನಿತ್ಯ ತಾಯಿ ಭೀಮಣಿ ಭಾಯಿ ಜೊತೆ ಜಗಳವಾಡುತ್ತಿದ್ದನಂತೆ. ನಿನ್ನೆ ರಾತ್ರಿಯೂ ಜಗಳವಾಡಿದ್ದು, ಮನೆಯಿಂದ ಹೊರ ಹೋದಾಗ ಕೃತ್ಯ ನಡೆದಿದೆ. ಬೇಮಳಖೇಡಾ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ :ಚರ್ಚ್ ಲೈಟ್ ಆಫ್ ಮಾಡಲು ಹೋಗಿದ್ದ ಮಹಿಳೆ ಮೇಲೆ ಅತ್ಯಾಚಾರ ಯತ್ನ; ಕಾಮುಕನ ಬಂಧನ
Last Updated : Oct 19, 2022, 7:10 PM IST