ಕರ್ನಾಟಕ

karnataka

ETV Bharat / state

ಆಕಸ್ಮಿಕ ಬೆಂಕಿ: 300 ಕ್ಕೂ ಅಧಿಕ ಮಾವಿನ ಮರಗಳು ಭಸ್ಮ - 300 ಕ್ಕೂ ಅಧಿಕ ಮಾವಿನ ಮರಗಳು ಭಸ್ಮ

ಮಾವಿನ ತೋಟಕ್ಕೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ 7 ಎಕರೆ ಜಮೀನಿನಲ್ಲಿದ್ದ 630 ಮಾವಿನ ಮರಗಳ ಪೈಕಿ 300 ಕ್ಕೂ ಅಧಿಕ ಮಾವಿನ ಮರಗಳು ಬೆಂಕಿಗೆ ಆಹುತಿಯಾಗಿವೆ.

ಮಾವಿನ ತೋಟಕ್ಕೆ ತಗುಲಿದ  ಆಕಸ್ಮಿಕ ಬೆಂಕಿ
ಮಾವಿನ ತೋಟಕ್ಕೆ ತಗುಲಿದ ಆಕಸ್ಮಿಕ ಬೆಂಕಿ

By

Published : Mar 12, 2021, 7:30 AM IST

ಬಸವಕಲ್ಯಾಣ: ಮಾವಿನ ತೋಟಕ್ಕೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ 300 ಕ್ಕೂ ಅಧಿಕ ಮಾವಿನ ಮರಗಳು ಬೆಂಕಿಗೆ ಆಹುತಿಯಾದ ಘಟನೆ ತಾಲೂಕಿನ ಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮಾವಿನ ತೋಟಕ್ಕೆ ತಗುಲಿದ ಆಕಸ್ಮಿಕ ಬೆಂಕಿ

ಹಳ್ಳಿ ಗ್ರಾಮದ ಮಹಾಲಿಂಗ ರಾಮಚಂದ್ರ ಬಿರಾದಾರ ಎನ್ನುವರಿಗೆ ಸೇರಿದ ಮಾವಿನ ತೋಟಕ್ಕೆ ಬೆಂಕಿ ತಗುಲಿದ್ದು, ಒಟ್ಟು 7 ಎಕರೆ ಜಮೀನಿನಲ್ಲಿದ್ದ 630 ಮಾವಿನ ಮರಗಳ ಪೈಕಿ, 300 ಕ್ಕೂ ಅಧಿಕ ಮಾವಿನ ಮರಗಳು ಬೆಂಕಿಗೆ ಆಹುತಿಯಾಗಿವೆ.

ಇನ್ನು ಬೆಂಕಿ ತಗುಲಿದ್ದನ್ನು ಗಮನಿಸಿದ ಸ್ಥಳೀಯರು ತಕ್ಷಣ ಕಾರ್ಯಪ್ರವರ್ತರಾಗಿ ಬೆಂಕಿ ನಂದಿಸುವ ಮೂಲಕ ಹೆಚ್ಚಿನ ಹಾನಿ ತಪ್ಪಿಸಿದ್ದಾರೆ. ಘಟನೆಯಿಂದಾಗಿ ಸುಮಾರು 3 ಲಕ್ಷಕ್ಕೂ ಅಧಿಕ ರೂ. ಮೌಲ್ಯದ ಹಾನಿ ಸಂಭವಿಸಿದೆ ಎಂದು ತಿಳಿದು ಬಂದಿದೆ.

ABOUT THE AUTHOR

...view details