ಕರ್ನಾಟಕ

karnataka

ETV Bharat / state

ಹುಲಸೂರು ಆಸ್ಪತ್ರೆಗೆ ಶಾಸಕರ ಭೇಟಿ: ವೈದ್ಯರಿಗೆ ನಿರ್ದೇಶನ

ಕೊರೊನಾ ತಡೆಗಟ್ಟುವ ಸಂಬಂಧ ಕೇಂದ್ರ ಸರ್ಕಾರ ದೇಶಾದ್ಯಂತ ಲಾಕ್‌ಡೌನ್ ಮಾಡಿದೆ. ಆದರೆ, ಕೆಲ ಯುವಕರು ವಿನಾಕಾರಣ ರಸ್ತೆಯಲ್ಲಿ ಓಡಾಡುತ್ತಿದ್ದಾರೆ. ಪ್ರಜ್ಞಾವಂತೆರೇ ತಪ್ಪು ಮಾಡಿದರೆ, ಹೇಗೆ ಎಂದು ಶಾಸಕರು ಪ್ರಶ್ನಿಸಿದರು. ಸಂಚಾರ ನಿಯಂತ್ರಣಕ್ಕಾಗಿ ಶ್ರಮಿಸುತ್ತಿರುವ ಪೊಲೀಸರಿಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.

By

Published : Mar 28, 2020, 10:26 PM IST

MLA visits Hulasur Hospital
ಹುಲಸೂರು ಆಸ್ಪತ್ರೆಗೆ ಶಾಸಕರ ಭೇಟಿ

ಬಸವಕಲ್ಯಾಣ: ಗಡಿಗೆ ಹೊಂದಿಕೊಂಡಿರುವ ಹುಲಸೂರು ತಾಲೂಕು ವ್ಯಾಪ್ತಿಯಲ್ಲಿ ಹೊರ ರಾಜ್ಯದಿಂದ ನೂರಾರು ಜನರು ಆಗಮಿಸುತ್ತಿದ್ದು, ಹೊರಗಿನಿಂದ ಬಂದವರಿಗೆ ಕಡ್ಡಾಯವಾಗಿ ಆರೋಗ್ಯ ತಪಾಸಣೆ ಮಾಡಬೇಕು ಎಂದು ಶಾಸಕ ಬಿ.ನಾರಾಯಣರಾವ್​​​ ಹೇಳಿದರು.

ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದ ಶಾಸಕರು, ಪುಣೆ ಮತ್ತು ಮುಂಬೈ ಸೇರಿದಂತೆ ಹೊರಗಿನಿಂದ ಬಂದವರಿಗೆ ಆರೋಗ್ಯ ತಪಾಸಣೆ ಜೊತೆಗೆ ಅವರಿಗೆ 14 ದಿನಗಳ ಕಾಲ ಮನೆಯಲ್ಲಿ ಇರುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ಹುಲಸೂರು ಆಸ್ಪತ್ರೆಗೆ ಶಾಸಕರ ಭೇಟಿ

ಕೊರೊನಾ ಹಿನ್ನೆಲೆಯಲ್ಲಿ ಮಾಸ್ಕ್​​​, ಸ್ಯಾನಿಟೈಸರ್​​ ಸೇರಿದಂತೆ ಅಗತ್ಯ ವಸ್ತುಗಳು ಕೆಲವೇ ದಿನಗಳಲ್ಲಿ ಕೈ ಸೇರಲಿವೆ. ಅವುಗಳನ್ನು ಜನರಿಗೆ ವಿತರಿಸಬೇಕು. ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾಪಾಡಬೇಕು. ವ್ಯಾಟ್ಸ್​ಆ್ಯಪ್​​, ಫೇಸ್​​ಬುಕ್​ ಸೇರಿದಂತೆ ಸಾಮಾಜಿಕ ಜಾಣತಾಣದಲ್ಲಿ ಕಿಡಿಗೇಡಿಗಳು ತಪ್ಪು ಸಂದೇಶ ಹರಡುವ ಮೂಲಕ ಸಮಾಜದಲ್ಲಿ ಅಶಾಂತಿ ವಾತಾವರಣ ನಿರ್ಮಿಸುತಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ABOUT THE AUTHOR

...view details