ಕರ್ನಾಟಕ

karnataka

ವಸತಿ ಯೋಜನೆ ದುರ್ಬಳಕೆಗೆ ಜಿಲ್ಲಾಧಿಕಾರಿ ಹೊಣೆಗಾರರು..4 ಪುಟದ ಉತ್ತರ ನೀಡಿದ ಶಾಸಕ ಖಂಡ್ರೆ!

By

Published : May 24, 2020, 8:18 AM IST

ಭಾಲ್ಕಿ ತಾಲೂಕಿನ ವಸತಿ ಯೋಜನೆ ದುರ್ಬಳಕೆಯಲ್ಲಿ ಶಾಸಕ ಈಶ್ವರ ಖಂಡ್ರೆ ಅವರ ಪಾತ್ರ ಕುರಿತು ಜಿಲ್ಲಾಧಿಕಾರಿ ಡಾ.ಎಚ್.ಆರ್ ಮಹದೇವ್​ ಸ್ಪಷ್ಟೀಕರಣ ಕೇಳಿ ಬರೆದಿದ್ದ ಪತ್ರಕ್ಕೆ ಪ್ರತಿಯಾಗಿ ಶಾಸಕ ಈಶ್ವರ ಖಂಡ್ರೆ ಅವರು ಈ ಅವ್ಯವಹಾರದಲ್ಲಿ ಜಿಲ್ಲಾಧಿಕಾರಿಯನ್ನೆ ಹೊಣೆಗಾರರನ್ನಾಗಿ ಮರುಪತ್ರ ಬರೆದಿದ್ದಾರೆ.

Mla Ishwar Khandre  reply to DC Mahadev's letter
ವಸತಿ ಯೋಜನೆ ದುರ್ಬಳಕೆಗೆ ಜಿಲ್ಲಾಧಿಕಾರಿ ಹೊಣೆಗಾರರು..4 ಪುಟದ ಉತ್ತರ ನೀಡಿದ ಶಾಸಕ ಖಂಡ್ರೆ!

ಬೀದರ್:ಭಾಲ್ಕಿ ವಿಧಾನಸಭಾ ಕ್ಷೇತ್ರದಲ್ಲಿ 2015-16 ರಿಂದ 2018-19ರ ಅವಧಿಯಲ್ಲಿ ವಿವಿಧ ವಸತಿ ಯೋಜನೆಗಳ ಮಂಜೂರಾತಿಯಲ್ಲಿ ನಿಯಮ ಉಲ್ಲಂಘನೆ ಮಾಡಿ 91 ಕೋಟಿ ರೂಪಾಯಿಗಳ ಅಕ್ರಮ ನಡೆಸಲಾಗಿದೆ ಎನ್ನುವುದಾದರೆ ಅದಕ್ಕೆ ಜಿಲ್ಲಾಧಿಕಾರಿ ಮಹದೇವ್ ಅವರೇ ಸಂಪೂರ್ಣ ಹೊಣೆಗಾರರು ಎಂದು ಶಾಸಕ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ವಸತಿ ಯೋಜನೆ ದುರ್ಬಳಕೆಗೆ ಜಿಲ್ಲಾಧಿಕಾರಿ ಹೊಣೆಗಾರರು..4 ಪುಟದ ಉತ್ತರ ನೀಡಿದ ಶಾಸಕ ಖಂಡ್ರೆ!
ವಸತಿ ಯೋಜನೆ ದುರ್ಬಳಕೆಗೆ ಜಿಲ್ಲಾಧಿಕಾರಿ ಹೊಣೆಗಾರರು..4 ಪುಟದ ಉತ್ತರ ನೀಡಿದ ಶಾಸಕ ಖಂಡ್ರೆ!

ಇಷ್ಟೊಂದು ಹಣ ಎಲ್ಲಿ ಹೋಯಿತು, ಯಾರ ಖಾತೆಗೆ ಹೋಯಿತು ಎಂಬ ಲೆಕ್ಕವನ್ನ ಖುದ್ದು ಜಿಲ್ಲಾಧಿಕಾರಿ ಜನರಿಗೆ ಉತ್ತರ ನೀಡಬೇಕಾಗುತ್ತದೆ ಎಂದು ಖಂಡ್ರೆ ಸವಾಲು ಹಾಕಿದ್ದಾರೆ. ಭಾಲ್ಕಿ ತಾಲೂಕಿನಲ್ಲಿ ನಡೆದಿದೆ ಎನ್ನಲಾದ ವಸತಿ ಯೋಜನೆ ದುರ್ಬಳಕೆಯಲ್ಲಿ ಶಾಸಕ ಈಶ್ವರ ಖಂಡ್ರೆ ಅವರ ಪಾತ್ರ ಕುರಿತು ಜಿಲ್ಲಾಧಿಕಾರಿ ಡಾ.ಎಚ್.ಆರ್ ಮಹದೇವ್ ಅವರು ಸ್ಪಷ್ಟೀಕರಣ ಕೇಳಿ ಪತ್ರ ಬರೆದಿದ್ದರು.

ವಸತಿ ಯೋಜನೆ ದುರ್ಬಳಕೆಗೆ ಜಿಲ್ಲಾಧಿಕಾರಿ ಹೊಣೆಗಾರರು..4 ಪುಟದ ಉತ್ತರ ನೀಡಿದ ಶಾಸಕ ಖಂಡ್ರೆ!
ವಸತಿ ಯೋಜನೆ ದುರ್ಬಳಕೆಗೆ ಜಿಲ್ಲಾಧಿಕಾರಿ ಹೊಣೆಗಾರರು..4 ಪುಟದ ಉತ್ತರ ನೀಡಿದ ಶಾಸಕ ಖಂಡ್ರೆ!

ಇದಕ್ಕೆ ಪ್ರತಿಯಾಗಿ ಶಾಸಕ ಈಶ್ವರ ಖಂಡ್ರೆ ಅವರು ಈ ಅವ್ಯವಹಾರದಲ್ಲಿ ಜಿಲ್ಲಾಧಿಕಾರಿಯನ್ನೆ ಹೊಣೆಗಾರರನ್ನಾಗಿ, ಕರ್ತವ್ಯ ಲೋಪದ ಆರೋಪ ಮಾಡಿ ಉತ್ತರಿಸಿ ಮರುಪತ್ರ ಬರೆದಿದ್ದಾರೆ.

ABOUT THE AUTHOR

...view details