ಕರ್ನಾಟಕ

karnataka

ETV Bharat / state

ಕೊರೊನಾ ಹಿನ್ನೆಲೆ ಸರ್ಕಾರಿ ಆಸ್ಪತ್ರೆಗೆ ಸಚಿವ ಪ್ರಭು ಚವ್ಹಾಣ ದಾಖಲು: ಬೇಡ ಅಂದ್ರು ಸಚಿವರ ಭೇಟಿಗೆ ಬಂದ ಕಾರ್ಯಕರ್ತರು - ಸಚಿವ ಪ್ರಭು ಚವ್ಹಾಣಗೆ ಕೊರೊನಾ

ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಅವರಿಗೆ ಕೋವಿಡ್​ ಸೋಂಕು ತಗುಲಿರುವುದು ಖಚಿತವಾದ ಹಿನ್ನೆಲೆ ಚಿಕಿತ್ಸೆಗಾಗಿ ಔರಾದ್​ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

minister-prabhu-chawan-tested-corona-positive
ಸಚಿವ ಪ್ರಭು ಚವ್ಹಾಣಗೆ ಕೊರೊನಾ

By

Published : Sep 10, 2020, 3:57 PM IST

ಬೀದರ್: ಕೊರೊನಾ ಪಾಸಿಟಿವ್​​ ದೃಢಪಟ್ಟ ಹಿನ್ನೆಲೆ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಅವರನ್ನು ಔರಾದ್ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಚಿವ ಪ್ರಭು ಚವ್ಹಾಣಗೆ ಕೊರೊನಾ

ಔರಾದ್ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ವಿಶೇಷ ವಾರ್ಡ್​ನಲ್ಲಿ ಸಚಿವ ಪ್ರಭು ಚವ್ಹಾಣ ಅವರಿಗೆ ವೈದ್ಯಾಧಿಕಾರಿ ಡಾ.ಮಹೇಶ್ ಬಿರಾದರ ನೇತೃತ್ವದ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ. ಕೋವಿಡ್​​ ಲಕ್ಷಣಗಳು ಕಂಡು ಬಂದಿಲ್ಲವಾದರೂ, ವರದಿ ಪಾಸಿಟಿವ್​​ ಬಂದ ಹಿನ್ನೆಲೆ ಚಿಕಿತ್ಸೆ ನೀಡಲಾಗುತ್ತಿದೆ.

ಕೊರೊನಾ ಭೀತಿ ಮರೆತ ಅಭಿಮಾನಿಗಳು

ಆಸ್ಪತ್ರೆಗೆ ದಾಖಲಾಗಲು ಬಂದ ಸಚಿವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರು. ಹತ್ತಿರ ಯಾರು ಬರಬೇಡಿ ಎಂದು ಸಚಿವರು ಎಷ್ಟೇ ಮನವಿ ಮಾಡಿದ್ರು ಅಭಿಮಾನಿಗಳು, ಕಾರ್ಯಕರ್ತರು ಸಚಿವರನ್ನು ಕಾಣಲು ಆಸ್ಪತ್ರೆ ಹತ್ತಿರ ನೆರದಿದ್ದು ಕಂಡು ಬಂತು.

ABOUT THE AUTHOR

...view details