ಕರ್ನಾಟಕ

karnataka

ಒಳಗೆ ಸಚಿವ ಪ್ರಭು ಚೌಹಾಣ್ ಸಭೆ.. ಹೊರಗೆ ರೈತರ ಪ್ರತಿಭಟನೆ..

By

Published : Oct 16, 2019, 11:18 PM IST

ಸಚಿವ ಪ್ರಭು ಚೌಹಾಣ್‌ ಬೀದರ್ ನಗರದ ಜಿಲ್ಲಾ ಪಂಚಾಯತ್‌ನ ಜಿಲ್ಲಾ ಮಟ್ಟದ ಮೊದಲ ಪರಿಶೀಲನಾ ಸಭೆ ನಡೆಸಿದ್ರು. ಈ ವೇಳೆ ಸಚಿವರನ್ನು ಭೇಟಿಯಾಗಲು ಬಂದಿದ್ದ ರೈತರನ್ನು ಪೊಲೀಸರು ತಡೆದಿದ್ದಕ್ಕೆ ಆಕ್ರೋಶಗೊಂಡು ಪ್ರತಿಭಟನೆ ನಡೆಸಿದ್ರು.

ಆಕ್ರೋಶಗೊಂಡ ರೈತರಿಂದ ಪ್ರತಿಭಟನೆ

ಬೀದರ್: ಜಿಲ್ಲಾ ಪಂಚಾಯಿತ್‌ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌಹಾಣ್‌ ಸಭೆ ನಡೆಸುತ್ತಿದ್ರೇ, ಇತ್ತ ರೈತರು ನಡು ರಸ್ತೆಯಲ್ಲಿ ಕೂತು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.

ನಗರದ ಜಿಲ್ಲಾ ಪಂಚಾಯತ್‌ನಲ್ಲಿ ನಡೆದ ಜಿಲ್ಲಾ ಮಟ್ಟದ ಮೊದಲ ಪರಿಶೀಲನಾ ಸಭೆಯಲ್ಲಿ ಸಚಿವ ಪ್ರಭು ಚೌಹಾಣ್‌ ಭಾಗಿಯಾಗಿದ್ರು. ಹೊರಗೆ ಮುಖ್ಯ ರಸ್ತೆ ಮೇಲೆ ರೈತ ಸಂಘದ ನೇತೃತ್ವದಲ್ಲಿ ಹಲವಾರು ರೈತರು ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿದರು.

ಆಕ್ರೋಶಗೊಂಡ ರೈತರಿಂದ ಪ್ರತಿಭಟನೆ

ಹೆಸರು ಖರೀದಿ ಕೇಂದ್ರ ಆರಂಭಿಸುವಂತೆ ಮತ್ತು ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ಪರಿಹಾರ ನೀಡುವ ವಿಚಾರದಲ್ಲಿ ಸಚಿವರಿಗೆ ಮನವಿ ನೀಡಲು ಬಂದಿದ್ದ ರೈತರ ತಂಡವನ್ನು ಪೊಲೀಸರು ಗೇಟ್ ಬಳಿಯೇ ತಡೆದಿದ್ದಾರೆ. ಇದರಿಂದಾಗಿ ಆಕ್ರೋಶಗೊಂಡ ರೈತರು ಜಿಲ್ಲಾ ಪಂಚಾಯತ್‌ ಎದುರಿನ ರಸ್ತೆಯಲ್ಲೆ ಧರಣಿ ಕೂತು ಸಚಿವ ಪ್ರಭು ಚೌಹಾಣ್, ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ABOUT THE AUTHOR

...view details