ಕರ್ನಾಟಕ

karnataka

ETV Bharat / state

ಪೂರ್ವ ಸಿದ್ಧತೆ ಇಲ್ಲದೇ ಲಾಕ್​​​ಡೌನ್​​​​​​:  ಕಾರ್ಮಿಕರ ಸಾವಿಗೆ ಹೊಣೆ ಯಾರು?.. ಖಂಡ್ರೆ ಪ್ರಶ್ನೆ - Ishwar Khandre

ಲಾಕ್​ಡೌನ್​​ನಿಂದಾಗಿ ಅಂತರ್​​ ರಾಜ್ಯಗಳಲ್ಲಿ ಸಿಲುಕಿದ ವಲಸಿಗರು ಮನೆಗೆ ಕಾಲ್ನಡಿಗೆಯಲ್ಲಿ ವಾಪಸ್​​​​​​​​​​​​​​​​ ಆಗ್ತಿದ್ದಾರೆ. ರಸ್ತೆ ಅಪಘಾತಗಳಲ್ಲಿ ಕೆಲವು ಕಾರ್ಮಿಕರು ಸಾಯುತ್ತಿದ್ದಾರೆ. ಇದಕ್ಕೆಲ್ಲ ಯಾರು ಹೊಣೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಪ್ರಶ್ನೆ ಮಾಡಿದ್ದಾರೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಪ್ರಶ್ನೆ
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಪ್ರಶ್ನೆ

By

Published : May 18, 2020, 5:57 PM IST

ಬೀದರ್: ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಪೂರ್ವ ಸಿದ್ಧತೆಗಳಿಲ್ಲದೇ ಲಾಕ್​​ಡೌನ್ ಜಾರಿಗೊಳಿಸಿದ್ದರಿಂದ, ಹಲವೆಡೆ ವಲಸೆ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಇದಕ್ಕೆಲ್ಲ ಯಾರು ಹೊಣೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಪ್ರಶ್ನೆ ಮಾಡಿದ್ದಾರೆ.

ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಲಾಕ್​ಡೌನ್​​ನಿಂದಾಗಿ ಅಂತರ್​​ ರಾಜ್ಯಗಳಲ್ಲಿ ಸಿಲುಕಿದ ವಲಸಿಗರು ಮನೆಗೆ ಕಾಲ್ನಡಿಗೆಯಲ್ಲಿ ವಾಪಾಸ್​​​ ಆಗ್ತಿದ್ದಾರೆ. ಅವರ ಕಾಲಿಗೆ ಚಪ್ಪಲಿ ಇಲ್ಲ, ಜೇಬಿನಲ್ಲಿ ದುಡ್ಡಿಲ್ಲ, ಹೊಟ್ಟೆಗೆ ಊಟ ಇಲ್ಲ. ರಸ್ತೆ ಅಪಘಾತಗಳಲ್ಲಿ ಸಾವಾಗ್ತಿದೆ. ಇಷ್ಟೆಲ್ಲ ಆಗ್ತಿದ್ದರೂ ಅವರನ್ನು ಸುರಕ್ಷಿತವಾಗಿ ಮನೆಗೆ ತಲುಪಿಸುವ ಜವಾಬ್ದಾರಿ ಸರ್ಕಾರದ್ದಲ್ಲವೇ. ಪ್ರತಿಪಕ್ಷಗಳು ಪ್ರಶ್ನೆ ಮಾಡಿದ್ರೆ ದೇಶ ದ್ರೋಹಿ ಅಂತ ಪಟ್ಟ ಕಟ್ಟುತ್ತಾರೆ. ನಿಜವಾದ ದೇಶ ಪ್ರೇಮಿಗಳು ನಾವು ಎಂದು ಖಂಡ್ರೆ ಹೇಳಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಪ್ರಶ್ನೆ

ಬೀದರ್ ನಗರದಲ್ಲಿ ಕೋವಿಡ್ ಪ್ರಯೋಗಾಲಯ ಸ್ಥಾಪನೆ ಮಾಡಲು 25 ದಿನಗಳಿಂದ ತಯಾರಿ ನಡಿಯುತ್ತಾ ಇದೆ. ಜಿಲ್ಲಾದ್ಯಂತ ಸಂಕ್ರಮಣ ಆದ ಮೇಲೆ ಪ್ರಯೋಗಾಲಯ ಆರಂಭಿಸ್ತಾರಾ, ದುಡ್ಡ ಇಟ್ಟಕೊಂಡು ಏನ್ ಪೂಜೆ ಮಾಡ್ತೀರಾ ಎಂದು ಪ್ರಶ್ನಿಸಿದರು.

ಮಾಧ್ಯಮದವರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಿ:

ಕೋವಿಡ್-19 ವೈರಾಣು ನಿಯಂತ್ರಣ ಮಾಡುವ ಕಾರ್ಯದಲ್ಲಿ ದೃಶ್ಯ ಹಾಗೂ ಮುದ್ರಣ ಮಾಧ್ಯಮದ ಪ್ರತಿನಿಧಿಗಳು ವಾರಿಯರ್ಸ್ ಆಗಿ ಕೆಲಸ ಮಾಡ್ತಿದ್ದಾರೆ. ಅದೆಷ್ಟೋ ಪತ್ರಕರ್ತರಿಗೆ ಸಂಬಳ ಇಲ್ಲದೇ ಸಂಸ್ಥೆಗಳು ಹಣಕಾಸಿನ ತೊಂದರೆಯಲ್ಲಿ ಸಿಲುಕಿ ಸಂಕಷ್ಟದಲ್ಲಿವೆ. ಮಾಧ್ಯಮ ಕ್ಷೇತ್ರದ ಪುನರುಜ್ಜೀವನ ಮಾಡಲು ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಈಶ್ವರ ಖಂಡ್ರೆ ಆಗ್ರಹಿಸಿದ್ದಾರೆ.

ABOUT THE AUTHOR

...view details