ಬಸವಕಲ್ಯಾಣ:ಮಾರಕ ಕೊರೊನಾ ತಡೆಗಟ್ಟುವ ಸಲುವಾಗಿ ಶುಕ್ರವಾರದ ನಮಾಜ್ಗೆ ಯಾರೂ ಕೂಡಾ ಮಸೀದಿಗೆ ಆಗಮಿಸದೆ ತಮ್ಮ ತಮ್ಮ ಮನೆಗಳಲ್ಲಿಯೇ ಕುಳಿತು ಪ್ರಾರ್ಥನೆ ಸಲ್ಲಿಸಬೇಕು ಎಂದು ನಗರದ ಧಾರಾಗಿರಿ ಮಸಿದ್-ಇ-ಮಹ್ಮದಿಯಾ ಮೌಲಾನಾ ಅಬ್ದುಲ್ ಸಲಾಮ್ ಖಾಸ್ಮಿ ಮನವಿ ಮಾಡಿದ್ದಾರೆ.
ಮನೆಯಲ್ಲಿಯೇ ಕುಳಿತು ಶುಕ್ರವಾರದ ನಮಾಜ್ ಮಾಡಿ: ಮೌಲಾನಾ ಸಲಾಂ ಖಾಸ್ಮಿ ಕರೆ - basavakalyana in bidar
ಶುಕ್ರವಾರ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುವ ಮುಸ್ಲಿ ಬಾಂಧವರು ಮಸೀದಿಗೆ ಆಗಮಿಸದೆ ತಮ್ಮ ತಮ್ಮ ಮನೆಯಲ್ಲೇ ಕುಳಿತು ನಮಾಜ್ ಮಾಡಿ. ಈ ಮೂಲಕ ಕೊರೊನಾ ವೈರಸ್ ನಿಯಂತ್ರಿಸುವಲ್ಲಿ ಸಹಕರಿಸಬೇಕು ಎಂದು ಧಾರಾಗಿರಿ ಮಸಿದ್-ಇ-ಮಹ್ಮದಿಯಾ ಮೌಲಾನಾ ಅಬ್ದುಲ್ ಸಲಾಮ್ ಖಾಸ್ಮಿ ಮನವಿ ಮಾಡಿದ್ದಾರೆ.
ಮಸಿದಿಯಲ್ಲಿ ಶುಕ್ರವಾರದ ನಮಾಜ್ ರದ್ದು. ಮನೆಯಲ್ಲಿಯೇ ನಮಾಜ್ ಮಾಡಿ: ಖಾಸ್ಮಿ
ಮುಸ್ಲಿಂ ಧರ್ಮದವರು ಪ್ರತಿ ಶುಕ್ರವಾರದಂದು ಮಸೀದಿಯಲ್ಲಿ ಸಾಮೂಹಿಕ ಪವಿತ್ರ ನಮಾಜ್ ಸಲ್ಲಿಸುತ್ತಾರೆ. ಆದರೆ, ಕೊರೊನಾ ಸೋಂಕು ಹರಡುವ ಭೀತಿಯಿಂದಾಗಿ ಸಾಮೂಹಿಕ ನಮಾಜ್ ರದ್ದುಗೊಳಿಸಲಾಗಿದೆ. ನಮಾಜ್ ಸಲ್ಲಿಸುವ ಮೂಲಕ ಕೊರೊನಾ ನಿಯಂತ್ರಣಕ್ಕಾಗಿ ಅಲ್ಲಾಹುನಲ್ಲಿ ಪ್ರಾರ್ಥಿಸಬೇಕು. ಮಸೀದಿ ಕಮಿಟಿಯಿಂದ ತಗೆದುಕೊಳ್ಳಲಾದ ನಿರ್ಧಾರಕ್ಕೆ ಬದ್ಧರಾಗಿ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.