ಕರ್ನಾಟಕ

karnataka

ETV Bharat / state

ಮನೆ ಕಟ್ಟಲು ತಂದಿದ್ದ ಸಾಲದ ಬಾಧೆ : ಪತಿ-ಪತ್ನಿ ವಿಷ ಸೇವಿಸಿ ಆತ್ಮಹತ್ಯೆ - ಪತಿ-ಪತ್ನಿ ವಿಷ ಸೇವಿಸಿ ಆತ್ಮಹತ್ಯೆ

ಮನೆ ಕಟ್ಟಲೆಂದು ಸಂಜುಕುಮಾರ್ ದಂಪತಿ ಖಾಸಗಿ ಸಾಲ ಪಡೆದಿದ್ದರು. ಆದರೆ, ಈ ಸಾಲಬಾಧೆಯನ್ನು ತಾಳಲಾರದೆ ಇಬ್ಬರೂ ವಿಷ ಸೇವಿಸಿದ್ದರು. ತಕ್ಷಣವೇ ವಿಷಯ ತಿಳಿದು ಸಂಬಂಧಿಕರು ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ..

Couple commits suicide
Couple commits suicide

By

Published : Mar 23, 2022, 2:53 PM IST

ಬೀದರ್ ​​:ಪತಿ-ಪತ್ನಿ ಇಬ್ಬರೂ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೀದರ್ ಜಿಲ್ಲೆಯ ಕಮಲನಗರ ತಾಲೂಕಿನ ಡಿಗ್ಗಿ ಗ್ರಾಮದಲ್ಲಿ ನಡೆದಿದೆ. ಸಂಜುಕುಮಾರ್ ಗುಂಡಪ್ಪ ಬರ್ಗೆ (42) ಹಾಗೂ ಸವಿತಾ ಸಂಜುಕುಮಾರ್ (37) ಎಂಬುವರೇ ಆತ್ಮಹತ್ಯೆ ಮಾಡಿಕೊಂಡ ದಂಪತಿ. ಸಾಲ ಬಾಧೆ ತಾಳಲಾರದೆ ಈ ದಂಪತಿ ಸಾವಿಗೆ ಶರಣಾಗಿದ್ದಾರೆ.

ಮನೆ ಕಟ್ಟಲೆಂದು ಸಂಜುಕುಮಾರ್ ದಂಪತಿ ಖಾಸಗಿ ಸಾಲ ಪಡೆದಿದ್ದರು. ಆದರೆ, ಈ ಸಾಲಬಾಧೆಯನ್ನು ತಾಳಲಾರದೆ ಇಬ್ಬರೂ ವಿಷ ಸೇವಿಸಿದ್ದರು. ತಕ್ಷಣವೇ ವಿಷಯ ತಿಳಿದು ಸಂಬಂಧಿಕರು ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ದಂಪತಿ ಕೊನೆಯುಸಿರೆಳೆದಿದ್ದಾರೆ. ಕಮಲನಗರ ಸಿಪಿಐ ಘಾಳೆಪ್ಪ, ಪಿಎಸ್ಐ ಬಸವರಾಜ್ ಪಾಟೀಲ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮೃತ ಸವಿತಾ ಅವರ ತಾಯಿ ಪಾರ್ವತಿ ನೀಡಿದ ದೂರಿನ ಮೇರೆಗೆ ಕಮಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಮೂವರು ಹೆಂಡ್ತಿಯರ ಗಂಡನ ಕೊಲೆ ಪ್ರಕರಣ: ಪತಿಯ ಹತ್ಯೆಗೆ 10 ಲಕ್ಷ ಸುಪಾರಿ ಕೊಟ್ಟಿದ್ದು ಎರಡನೇ ಪತ್ನಿ!

ABOUT THE AUTHOR

...view details