ಕರ್ನಾಟಕ

karnataka

ಮಾಂಜ್ರಾ ನದಿಯಲ್ಲಿ ಅವ್ಯಾಹತ ಮರಳು ಸಾಗಣೆ, ದಂಧೆಕೋರರಿಂದ ಬ್ರೇಕ್​ಲೆಸ್​​ ಅಟ್ಟಹಾಸ...!

By

Published : May 27, 2020, 3:27 PM IST

ಲಾಕ್​ಡೌನ್​ನಲ್ಲಿ ಕಟ್ಟಡ ಕಾಮಗಾರಿಗಳೆಲ್ಲವೂ ಸ್ತಬ್ದವಾಗಿದ್ದವು, ಹೀಗಾಗಿ ಈ ದಂಧೆಕೋರರ ವ್ಯಾಪಾರವೇನೋ ನಡೆಯಲಿಲ್ಲ. ಆದ್ರೆ ನದಿಯಲ್ಲಿನ ಮರಳನ್ನು ಸಾಗಿಸಿ ಸಾವಿರಾರು ಟ್ರಿಪ್ ಮರಳನ್ನು ಸಂಗ್ರಹಿಸಿಟ್ಟಿದ್ದಾರೆ. ಅಲ್ಲದೇ ದಿನ ನಿತ್ಯ ವಾಂಜರಖೇಡಾ ಗ್ರಾಮದ ಮೂಲಕ ಮಹಾರಾಷ್ಟ್ರದ ಶಹಜನಿ ಔರಾದ್ ಭಾಗದಲ್ಲಿ ರಾಜ್ಯದ ಮರಳು ಅಕ್ರಮವಾಗಿ ಸಾಗಣೆ ಮಾಡ್ತಿದ್ದಾರೆ ಎನ್ನಲಾಗಿದೆ.

Heavy sand trafficking in the drained Manjra River
ಬತ್ತಿಹೊದ ಮಾಂಜ್ರಾ ನದಿಯಲ್ಲಿ ಅವ್ಯಾಹತ ಮರಳು ಸಾಗಾಣಿಕೆ

ಬೀದರ್: ಲಾಕ್​ಡೌನ್​ ನಡುವೆ ಭಯಂಕರ ಬೇಸಿಗೆಯಿಂದ ಬತ್ತಿ ಹೋದ ಜಿಲ್ಲೆಯ ಜೀವ ನದಿ ಮಾಂಜ್ರಾದಲ್ಲಿ ಅವ್ಯಾಹತವಾಗಿ ಅಕ್ರಮ ಮರಳು ಸಾಗಣೆ ನಡೆಯುತ್ತಿದೆ. ದಿನಕ್ಕೆ ನೂರಾರು ಟ್ರ್ಯಾಕ್ಟರ್​ಗಳು ನದಿ ಒಡಲನ್ನು ಬರಿದಾಗಿಸ್ತಿದ್ದು ಕಂಡೂ ಕಾಣದಂತೆ ಅಧಿಕಾರಿಗಳು ಜಾಣ ಮೌನರಾಗಿದ್ದಾರೆ.

ಜಿಲ್ಲೆಯ ಭಾಲ್ಕಿ ತಾಲೂಕಿನ ಜಾಮಖಂಡಿ, ಸಾಯಗಾಂವ್, ಮೇಹಕರ ಭಾಗದಲ್ಲಿ ಹಗಲು ರಾತ್ರಿ ಎನ್ನದೇ ನೂರಾರು ಜನರು ನದಿಯಲ್ಲಿನ ಮರಳನ್ನು ಅಕ್ರಮವಾಗಿ ಸಾಗಣೆ ಮಾಡ್ತಿದ್ದಾರೆ. ಬೇಸಿಗೆ ಆರಂಭದ ಜೊತೆಯಲ್ಲಿ ಕೊರೊನಾ ವೈರಾಣು ನಿಯಂತ್ರಣದಲ್ಲಿ ಅಧಿಕಾರಿಗಳು ಬ್ಯುಸಿ ಆಗಿದ್ದಾರೆ. ಅಕ್ರಮಕ್ಕೆ ಇದೇ ಸೂಕ್ತ ಸಮಯ ಎಂದು ದಂಧೆಕೊರರು ರಾಜಾರೋಷವಾಗಿ ಮರಳನ್ನು ಸಾಗಿಸುತ್ತಿರುವುದಷ್ಟೇ ಅಲ್ಲದೇ, ನಿರ್ಜನ ಪ್ರದೇಶದಲ್ಲಿ ಮರಳು ಸ್ಟಾಕ್ ಮಾಡಿರುವುದು ಕಂಡು ಬಂದಿದೆ.

ಬತ್ತಿಹೋದ ಮಾಂಜ್ರಾ ನದಿಯಲ್ಲಿ ಅವ್ಯಾಹತ ಮರಳು ಸಾಗಾಣಿಕೆ,
ಲಾಕ್​ಡೌನ್​ನಲ್ಲಿ ಕಟ್ಟಡ ಕಾಮಗಾರಿಗಳೆಲ್ಲವೂ ಸ್ತಬ್ದವಾಗಿದ್ದವು. ಹೀಗಾಗಿ ಈ ದಂಧೆಕೋರರ ವ್ಯಾಪರವೇನೋ ನಡೆಯಲಿಲ್ಲ. ಆದ್ರೆ ನದಿಯಲ್ಲಿನ ಮರಳನ್ನು ಸಾಗಿಸಿ ಸಾವಿರಾರು ಟ್ರಿಪ್​ ಮರಳನ್ನು ಸಂಗ್ರಹಿಸಿಟ್ಟಿದ್ದಾರೆ. ಅಲ್ಲದೇ ದಿನ ನಿತ್ಯ ವಾಂಜರಖೇಡಾ ಗ್ರಾಮದ ಮೂಲಕ ಮಹಾರಾಷ್ಟ್ರದ ಶಹಜನಿ ಔರಾದ್ ಭಾಗದಲ್ಲಿ ರಾಜ್ಯದ ಮರಳು ಅಕ್ರಮವಾಗಿ ಸಾಗಣೆ ಮಾಡ್ತಿದ್ದಾರೆ ಎನ್ನಲಾಗಿದೆ.
ಮಾಂಜ್ರಾ ಮರಳಿಗೆ ಸಾಮಾನ್ಯವಾಗಿ 4 ರಿಂದ 5 ಸಾವಿರ ರೂಪಾಯಿಗೆ ಒಂದು ಟ್ರ್ಯಾಕ್ಟರ್ ನಿಗದಿಯಾಗಿದೆಯಂತೆ. ಅಲ್ಲದೇ ಮಾರುಕಟ್ಟೆಯಲ್ಲಿ ಮರಳಿಗೆ ಭಾರಿ ಬೇಡಿಕೆ ಈಗ ಆರಂಭವಾಗಿದೆ. ಹೀಗಾಗಿ ಈ ದಂಧೆಕೋರರು ದುಬಾರಿ ಬೆಲೆಗೆ ಮಾರಾಟ ಮಾಡ್ತಿದ್ದಾರೆ ಎನ್ನಲಾಗಿದೆ. ಕಂದಾಯ, ಗಣಿ ಮತ್ತು ಭೂ ವಿಜ್ಞಾನ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಈ ಅಕ್ರಮಕ್ಕೆ ಬ್ರೇಕ್ ಹಾಕಬೇಕಿತ್ತು. ಆದ್ರೆ ಎರಡು ತಿಂಗಳಿಂದ ಸಾಮೂಹಿಕವಾಗಿ ನಡೆಯುತ್ತಿರುವ ಅಕ್ರಮ ದಂಧೆಗೆ ಕಡಿವಾಣ ಹಾಕಲಾಗದಷ್ಟು ಜಾಣ ಕುರುಡುತನ ಪ್ರದರ್ಶಿಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಜಿರಗ್ಯಾಳ ಗ್ರಾಮದ ಬಳಿ ತೆಲಂಗಾಣದ ಮರಳು ಸ್ಟಾಕ್:

ಲಾಕ್​ಡೌನ್​ ಆರಂಭವಾದಾಗಿನಿಂದಲೂ ಅಕ್ರಮ ಮರಳು ದಂಧೆಕೊರರು ಬ್ರೇಕ್ ಇಲ್ಲದೇ ಮರಳು ದಂಧೆ ನಡೆಸಿದ್ದಾರೆ. ತೆಲಂಗಾಣದ ಸಂಗಾರೆಡ್ಡಿ ಭಾಗದಿಂದ ಬಿಳಿ ಮರಳನ್ನು ಅಕ್ರಮವಾಗಿ ರಾಜ್ಯದ ಗಡಿ ಪ್ರವೇಶ ಮಾಡಿ ಅದನ್ನು ಭಾಲ್ಕಿ ತಾಲೂಕಿನ ಜಿರಗ್ಯಾಳ ಗ್ರಾಮದ ಹೊರ ವಲಯದ ನಿರ್ಜನ ಪ್ರದೇಶದಲ್ಲಿ ಶೇಖರಣೆ ಮಾಡಲಾಗಿದೆ ಎಂದು ವ್ಯಕ್ತಿಯೊಬ್ಬ ಮಾಹಿತಿ ನೀಡಿದ್ದಾನೆ.

ಈ ಬಿಳಿ ಮರಳು ಸಾಮಾನ್ಯವಾಗಿ 5000 ಗೆ ಒಂದು ಬ್ರಾಸ್ (ಟ್ರ್ಯಾಕ್ಟರ್) ಸಿಗ್ತಿತ್ತು. ಆದ್ರೆ ಈಗ ಇದರ ಮಾರುಕಟ್ಟೆ ಬೆಳೆ 8 ರಿಂದ 10 ಸಾವಿರದ ವರೆಗೆ ಆಗಿದೆ. ಇಷ್ಟಾದರೂ ಈ ಮರಳು ಕಟ್ಟಡ ಕಾಮಗಾರಿಗಳಿಗೆ ಸುಲಭವಾಗಿ ಸಿಗೋದಿಲ್ಲ. ಅದಕ್ಕೆ ಅವರ ಸಂಪರ್ಕದಲ್ಲಿರುವ ಮಧ್ಯವರ್ತಿಗಳಿಂದಲೇ ಪಡೆಯಬೇಕು ಎನ್ನುತ್ತಾರೆ ಸ್ಥಳೀಯರು.

ABOUT THE AUTHOR

...view details