ಕರ್ನಾಟಕ

karnataka

ಲಾಕ್‌ಡೌನ್‌ಗೆ ಬಸವಕಲ್ಯಾಣದಲ್ಲಿ ಉತ್ತಮ ಪ್ರತಿಕ್ರಿಯೆ

By

Published : Jul 16, 2020, 11:33 PM IST

ಕೊರೊನಾ ವೈರಸ್​ ನಿಯಂತ್ರಣಕ್ಕಾಗಿ ಬೀದರ್ ಜಿಲ್ಲೆಯಲ್ಲಿ ಲಾಕ್​ಡೌನ್​ ಘೋಷಿಸಲಾಗಿದ್ದು, ಬಸವಕಲ್ಯಾಣ ನಗರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

good response to lockdown in basavakalyana city
ಲಾಕ್‌ಡೌನ್‌ಗೆ ಬಸವಕಲ್ಯಾಣದಲ್ಲಿ ಉತ್ತಮ ಪ್ರಕ್ರಿಯೆ..ಜನರಿಲ್ಲದೆ ಬಿಕೋ ಎನ್ನುತ್ತಿದ್ದ ರಸ್ತೆಗಳು

ಬಸವಕಲ್ಯಾಣ (ಬೀದರ್): ಕೊರೊನಾ ವೈರಸ್​ ನಿಯಂತ್ರಣಕ್ಕಾಗಿ ಜಾರಿಗೊಳಿಸಲಾಗಿರುವ ಲಾಕ್‌ಡೌನ್‌ಗೆ ಬಸವಕಲ್ಯಾಣ ನಗರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಲಾಕ್‌ಡೌನ್‌ಗೆ ಬಸವಕಲ್ಯಾಣದಲ್ಲಿ ಉತ್ತಮ ಪ್ರಕ್ರಿಯೆ..ಜನರಿಲ್ಲದೆ ಬಿಕೋ ಎನ್ನುತ್ತಿದ್ದ ರಸ್ತೆಗಳು

ಲಾಕ್​ಡೌನ್​ ಹಿನ್ನೆಲೆ, ನಗರದ ಎಲ್ಲ ಅಂಗಡಿ-ಮುಂಗಟ್ಟುಗಳು, ಹೋಟೆಲ್‌, ಅಂಗಡಿಗಳು ಬಂದ್​ ಆಗಿದ್ದು, ಜನ ಸಂಚಾರವಿಲ್ಲದೇ ರಸ್ತೆಗಳು ಖಾಲಿ ಖಾಲಿಯಾಗಿ ಗೋಚರಿಸುತ್ತಿದ್ದವು. ಬೆಳೆಗ್ಗೆ 6 ರಿಂದ 11ಗಂಟೆಯವರೆಗೆ ತರಕಾರಿ, ಹಾಲು, ಹಣ್ಣು ಅಂಗಡಿಗಳು ತೆರೆದಿದ್ದವು. ನಂತರ ಮೆಡಿಕಲ್ ಶಾಪ್ ಹೊರತುಪಡಿಸಿ, ಉಳಿದೆಲ್ಲಾ ಅಂಗಡಿಗಳು ಬಂದ್​ ಆಗಿದ್ದವು.

ಪೊಲೀಸರು ಬೆಳಗ್ಗೆ 6ರಿಂದಲೇ ನಗರದ ಆಯ್ದ ಸ್ಥಳಗಳಲ್ಲಿ ನಿಂತು ರಸ್ತೆಗೆ ಬರುವ ಬೈಕ್‌ಗಳನ್ನು ತಡೆದು ಪರಿಶೀಲನೆ ನಡೆಸುತ್ತಿದ್ದರು. ಅವಶ್ಯಕ ಕೆಲಸಗಳಿಗೆ ಹೋಗುವವರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಅನಗತ್ಯವಾಗಿ ರಸ್ತೆಗಿಳಿದವರಿಗೆ ದಂಡ ವಿಧಿಸುವ ಮೂಲಕ ಬಿಸಿ ಮುಟ್ಟಿಸಲಾಯಿತು. ಮತ್ತೆ ಕೆಲವರ ಬೈಕ್‌ಗಳನ್ನು ಜಪ್ತಿ ಮಾಡಿ ಠಾಣೆಗೆ ಕೊಂಡೊಯ್ಯುತ್ತಿರುವುದು ಕಂಡುಬಂತು.

ABOUT THE AUTHOR

...view details