ಕರ್ನಾಟಕ

karnataka

ETV Bharat / state

ಸುವರ್ಣಕಾರರ ಸಂಘದಿಂದ ಮುಂಜಾಗೃತಾ ಕ್ರಮ: ಸಂಜೆ 5ಕ್ಕೆ ಎಲ್ಲಾ ಅಂಗಡಿಗಳು ಬಂದ್​​

ಕೊರೊನಾ ನಿಯಂತ್ರಣಕ್ಕಾಗಿ ಕೈಗೊಳ್ಳಬೇಕಾದ ಮುಂಜಾಗೃತಾ ಕ್ರಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವ ಕುರಿತು ಬಸವಕಲ್ಯಾಣದ ಸರಾಫ್ ಮತ್ತು ಸುವರ್ಣಕಾರರ ಸಂಘದಿಂದ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

By

Published : Jul 2, 2020, 11:46 PM IST

Gold shops close at 5pm everyday
ಅಂಗಡಿಗಳು ಬಂದ್​​

ಬಸವಕಲ್ಯಾಣ:ಸರಾಫ್ ಮಾರ್ಕೆಟ್​ನಲ್ಲಿ ಸುವರ್ಣಕಾರರ ಸಂಘದಿಂದ ಆಯೋಜಿಸಲಾಗಿದ್ದ ಕೊರೊನಾ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಮುಂಜಾಗೃತಾ ಕ್ರಮಗಳ ಬಗ್ಗೆ ಜಾಗೃತಿ ಮತ್ತು ಸೇವಾ ಭಾರತಿ ಸಹಕಾರದಿಂದ ಸ್ಯಾನಿಟೈಸರ್ ವಿತರಣೆ ಕಾರ್ಯಕ್ರಮಕ್ಕೆ ತಹಶೀಲ್ದಾರ್​ ಸಾವಿತ್ರಿ ಶರಣು ಸಲಗರ್ ಚಾಲನೆ ನೀಡಿದರು.

ಇಲ್ಲಿನ ಸರಾಫ್ ಮಾರ್ಕೆಟ್‌ನಲ್ಲಿ ಸುಮಾರು 150 ಅಂಗಡಿಗಳಿದ್ದು, ಸೋಮವಾರದಿಂದ ಶನಿವಾರದವರೆಗೆ ಪ್ರತಿ ದಿನ ಸಂಜೆ 5ರ ವರೆಗೆ ಮಾತ್ರ ಅಂಗಡಿಗಳನ್ನು ತೆರೆದಿಡಲು ಮತ್ತು ಮಾಸ್ಕ್ ಧರಿಸಿದವರಿಗೆ ಮಾತ್ರ ಅಂಗಡಿಗೆ ಪ್ರವೇಶ ಎನ್ನುವ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ.

ಸುವರ್ಣಕಾರರ ಸಂಘದಿಂದ ಮುಂಜಾಗೃತಾ ಕ್ರಮ

ಕೊರೊನಾ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅವಶ್ಯಕ. ಸರ್ಕಾರದ ಆದೇಶ ಮತ್ತು ಮಾರ್ಗಸೂಚಿಗಳನ್ನು ಪ್ರತಿಯೊಬ್ಬರು ಕಟ್ಟು ನಿಟ್ಟಾಗಿ ಪಾಲಿಸಬೇಕು. ಕಾಂಪ್ಲೆಕ್ಸ್​ನಲ್ಲಿ ಕುಡಿಯುವ ನೀರು ಸೇರಿದಂತೆ ಅಗತ್ಯವಿರುವ ಮೂಲ ಸೌಲಭ್ಯ ಕಲ್ಪಿಸಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಹಶೀಲ್ದಾರರು ತಿಳಿಸಿದರು.

ABOUT THE AUTHOR

...view details