ಬೀದರ್: ಉಚಿತ ನೀರು ಕೋಡ್ತಿನಿ ಅಂತ ಕೋಟ್ಯಂತರ ರೂಪಾಯಿ ಲೂಟಿ ಮಾಡಿದ್ದಿರಾ ಎಂದು ತುಂಬಿದ ಸಭೆಯಲ್ಲೇ ರೈತನೋರ್ವ ಮಾಡಿದ ಆರೋಪಕ್ಕೆ ಸಚಿವ ರಹೀಂ ಖಾನ್ ಕಕ್ಕಾಬಿಕ್ಕಿಯಾದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ರೈತನೋರ್ವ ಸಂಸದ ಭಗವಂತ ಖೂಬಾ, ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪೂರ್ ಸಮ್ಮುಖದಲ್ಲೇ ಸಚಿವ ರಹೀಂ ಖಾನ್ ಮುಖದಲ್ಲಿ ನೀರಿಳಿಯುವಂತೆ ಮಾಡಿದರು. ಜನರಿಗೆ ಉಚಿತವಾಗಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಕೊಡಿಸುತ್ತಿದ್ದೇನೆಂದು ಫೋಟೊಗಳನ್ನು ಟ್ಯಾಂಕರ್ಗಳ ಮೇಲೆ ಅಂಟಿಸಿಕೊಂಡು ಪ್ರಚಾರ ಪಡೆದುಕೊಂಡಿದ್ದೀರಿ. ಕಾರಂಜಾ ಜಲಾಶಯದ ನೀರು ತೆಗೆದುಕೊಳ್ಳುತ್ತೀರಿ. ನಮಗೆ ಪರಿಹಾರ ಕೊಡಲಿಕ್ಕೆ ಆಗೋದಿಲ್ಲವಾ ಎಂದು ರೈತ ಕಿಡಿಕಾರಿದ್ದಾರೆ.