ಕರ್ನಾಟಕ

karnataka

ETV Bharat / state

ಬೀದರ್​​ನಲ್ಲಿ ವರುಣಾರ್ಭಟ : ಸಿಡಿಲು ಬಡಿದು ರೈತ ಸಾವು

ಗದ್ದೆಯಲ್ಲಿ ಕೆಲಸ ಮಾಡುತ್ತಿರುವಾಗ ಸಿಡಿಲು ಬಡಿದು, ರೈತನೊಬ್ಬ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಬೀದರ್ ತಾಲೂಕಿನ ಅಲಿಯಂಬರ್ ಗ್ರಾಮದಲ್ಲಿ ನಡೆದಿದೆ.

By

Published : May 30, 2020, 5:31 PM IST

Farmer  death in Bidar
ಬೀದರ್​​ನಲ್ಲಿ ಸಿಡಿಲು ಬಡಿದು ರೈತ ಸಾವು

ಬೀದರ್:ಗದ್ದೆಯಲ್ಲಿ ಬೇಲಿ ಹಚ್ಚುವ ಕೆಲಸದಲ್ಲಿ ತೊಡಗಿದ್ದಾಗ ಆಕಸ್ಮಿಕವಾಗಿ ಸಿಡಿಲು ಬಡಿದು, ರೈತನೊಬ್ಬ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಬೀದರ್ ತಾಲೂಕಿನ ಅಲಿಯಂಬರ್ ಗ್ರಾಮದಲ್ಲಿ ಜರುಗಿದೆ.

ಬಸವರಾಜ ಶೆಟ್ಟಿಗೊಂಡೆ (53) ಎಂಬ ರೈತ ಮೃತದುರ್ದೈವಿ. ಗದ್ದೆಯಲ್ಲಿ ಕೆಲಸ ಮಾಡುತ್ತಿರುವಾಗ ಬಿರುಗಾಳಿ ಸಹಿತ ಮಳೆಯಿಂದಾಗಿ, ಸಿಡಿಲು ಬಡಿದಿದೆ. ಈ ವೇಳೆಯಲ್ಲಿ ಮರದ ಪಕ್ಕದಲ್ಲಿಯೇ ಇದ್ದ ಬಸವರಾಜ ಅಸುನೀಗದ್ದಾರೆ.

ಸ್ಥಳಕ್ಕೆ ಜನವಾಡ ಪಿಎಸ್​​​​​ಐ ಗಂಗಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

For All Latest Updates

ABOUT THE AUTHOR

...view details