ಕರ್ನಾಟಕ

karnataka

By

Published : Apr 16, 2020, 2:53 PM IST

ETV Bharat / state

ಕಳ್ಳಭಟ್ಟಿ ಅಡ್ಡೆ ಮೇಲೆ ಅಬಕಾರಿ ಅಧಿಕಾರಿಗಳ ದಾಳಿ: 300 ಲೀಟರ್ ಬೆಲ್ಲದ​​​ ಕೊಳೆ ನಾಶ

ಮಮದಾಪುರ ತಾಂಡದ ಹೊರ ವಲಯದ ಮೇವಿನ ಬಣಿವೆಯಲ್ಲಿ ಹೂತಿಟ್ಟ 300 ಲೀಟರ್ ಬೆಲ್ಲದ ಕೊಳೆ ಹಾಗೂ 10 ಲಿಟರ್ ಕಳ್ಳಭಟ್ಟಿ ಸರಾಯಿಯನ್ನು ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡು ನಾಶ ಮಾಡಿದ್ದಾರೆ.

Excise Officer Attack on Leaker
ಕಳ್ಳಬಟ್ಟಿ ಅಡ್ಡೆ ಮೇಲೆ ಅಬಕಾರಿ ಅಧಿಕಾರಿಗಳ ದಾಳಿ

ಬೀದರ್: ಲಾಕ್​​ಡೌನ್​​ನಿಂದಾಗಿ ಮದ್ಯ ಮಾರಾಟಕ್ಕೆ ನಿಷೇಧ ಹೆರಿದ ಹಿನ್ನೆಲೆಯಲ್ಲಿ ಅಕ್ರಮವಾಗಿ ಮಾರಾಟಕ್ಕೆ ತಯಾರಿಸಿ ಇಟ್ಟಿದ್ದ ಕಳ್ಳಭಟ್ಟಿ ಅಡ್ಡೆ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ತಾಲೂಕಿನ ಮಮದಾಪುರ ತಾಂಡದ ಹೊರ ವಲಯದ ಮೇವಿನ ಬಣಿವೆಯಲ್ಲಿ ಹೂತಿಟ್ಟ 300 ಲೀಟರ್ ಬೆಲ್ಲದ ಕೊಳೆ ಹಾಗೂ 10 ಲಿಟರ್ ಕಳ್ಳಭಟ್ಟಿ ಸರಾಯಿ ವಶಪಡಿಸಿ ನಾಶ ಮಾಡಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಆರೋಪಿ ಪರಾರಿಯಾಗಿದ್ದಾನೆ. ಅಬಕಾರಿ ಉಪಾಯುಕ್ತ ವೀರಣ್ಣ ಬಾಗೇವಾಡಿ, ಉಪಾಧೀಕ್ಷಕ ಅನೀಲಕುಮಾರ್ ಪೊದ್ದಾರ ನೇತೃತ್ವದಲ್ಲಿ ಅಬಕಾರಿ ನಿರೀಕ್ಷಕರು, ಸಿಬ್ಬಂದಿ ದಾಳಿ ನಡೆಸಿದ್ದಾರೆ.

ABOUT THE AUTHOR

...view details