ಕರ್ನಾಟಕ

karnataka

ETV Bharat / state

ಜನ ಸಾಯ್ತಾ ಇದ್ದಾರೆ, ಕಾಟಾಚಾರಕ್ಕೆ ಮೀಟಿಂಗ್ ಮಾಡ್ತಿದ್ದಿರಾ.? ಶಾಸಕ ಈಶ್ಚರ ಖಂಡ್ರೆ - ಸಚಿವ ಪ್ರಭು ಚವ್ಹಾಣ ನಡುವೆ ವಾಕ್ಸಮರ - ಸಚಿವ ಪ್ರಭು ಚವ್ಹಾಣ

ಸಚಿವ ಪ್ರಭು ಚವ್ಹಾಣ ಅವರ ಅಧ್ಯಕ್ಷತೆಯಲ್ಲಿ ನಡೆದ ಕೊರೊನಾ ವೈರಾಣು ನಿಯಂತ್ರಣ ಕುರಿತ ಸಭೆಯಲ್ಲಿ ಭಾಲ್ಕಿ ಶಾಸಕ ಈಶ್ವರ ಖಂಡ್ರೆ ವಿಡಿಯೊ ಕಾನ್ಫರೆನ್ಸ್ ಮೂಲಕ ಪಾಲ್ಗೊಂಡಿದ್ದರು.

Eswar khandre
Eswar khandre

By

Published : Apr 24, 2021, 6:55 PM IST

Updated : Apr 24, 2021, 7:45 PM IST

ಬೀದರ್: ನನ್ನ ಕ್ಷೇತ್ರದಲ್ಲಿ ಜನ ಸಾಯ್ತಾ ಇದಾರೆ, ಸತ್ತರೆ ಅದನ್ನ ತಂದು ನಿಮ್ಮ ತಲೆಗೆ ಕಟ್ಟುತ್ತೇನಿ. ನಿಮ್ಮ ಹೆಸರು ಹೇಳಿ ಜನ ಸಾಯ್ತಾ ಇದಾರೆ. 10 ಜನ ಸತ್ತರು ನಾಚಿಕೆ ಆಗೊಲ್ಲವಾ, ನಿಮಗೆ ಮಾನವೀಯತೆ ಇದೆಯಾ...? ಹೀಗೆ ಶಾಸಕ ಈಶ್ವರ ಖಂಡ್ರೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್​ ಅವರ ಮೇಲೆ ಗರಂ ಆದ ಘಟನೆ ನಡೆದಿದೆ.

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್​ ಅವರ ಅಧ್ಯಕ್ಷತೆಯಲ್ಲಿ ನಡೆದ ಕೊರೊನಾ ವೈರಾಣು ನಿಯಂತ್ರಣ ಕುರಿತ ಸಭೆಯಲ್ಲಿ ಭಾಲ್ಕಿ ಶಾಸಕ ಈಶ್ವರ ವಿಡಿಯೊ ಕಾನ್ಫರೆನ್ಸ್ ಮೂಲಕ ಪಾಲ್ಗೊಂಡಿದ್ದರು.

ಶಾಸಕ ಈಶ್ಚರ ಖಂಡ್ರೆ - ಸಚಿವ ಪ್ರಭು ಚವ್ಹಾಣ ನಡುವೆ ವಾಕ್ಸಮರ

ಭಾಲ್ಕಿ ತಾಲೂಕು ಆಸ್ಪತ್ರೆ ಸಿಎಂಓ ಡಾ.ರೂಬಿನಾ ಅವರನ್ನು ಬದಲಾವಣೆ ಮಾಡಬೇಕು ಎಂದು ಕೆಡಿಪಿ ಸಭೆಯಲ್ಲಿ ಮನವಿ ಮಾಡಿದ ಬದಲಾವಣೆ ಮಾಡಿಲ್ಲ. ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ. ಹೀಗಿರುವಾಗ ಸರ್ಕಾರದ ಮನಸ್ಥಿತಿ ಜನಪರವಾಗಿಲ್ಲ ಎಂದು ಕೋಪದಲ್ಲೇ ಮಾತನಾಡಿದರು.

ಕಾಟಾಚಾರಕ್ಕೆ ಮೀಟಿಂಗ್ ಮಾಡುವುದಿದ್ದರೆ ನಮಗ್ಯಾಕ್ರಿ ಕರೆಯುತ್ತೀರಿ ಏನಾದರೂ ಮಾಡಕೊಳ್ಳಿ ಎಂದು ಖಂಡ್ರೆ ಅಸಮಾಧಾನ ಹೊರ ಹಾಕಿದರು.

ಸಭೆಯಲ್ಲಿ ಸಂಸದ ಭಗವಂತ ಖೂಬಾ, ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಸೇರಿದಂತೆ ಶಾಸಕರು ಮುಖಂಡರು ಉಪಸ್ಥಿತರಿದ್ದರು.

Last Updated : Apr 24, 2021, 7:45 PM IST

ABOUT THE AUTHOR

...view details