ಕರ್ನಾಟಕ

karnataka

ETV Bharat / state

ತರಕಾರಿ ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರ ಪಾಲನೆ: ಮಾದರಿಯಾದ್ರು ಭಾಲ್ಕಿ ಜನತೆ - covid 19 bhalki people follow social distence

ಕೊವಿಡ್ -19 ವೈರಸ್ ಸೊಂಕು ನಿಯಂತ್ರಣಕ್ಕೆ ಸಾಮಾಜಿಕ ಅಂತರವೇ ಸದ್ಯಕ್ಕಿರುವ ಮದ್ದಾಗಿದೆ. ಹಾಗಾಗಿ ಕೆಲವು ಕಡೆ ಜನ ಇದನ್ನು ಅಚ್ಚುಕಟ್ಟಾಗಿ ಪಾಲಿಸುತ್ತಿದ್ದಾರೆ.

KN_BDR_06_10_SOCIAL DISTANCE_7203280_AV_0
ತರಕಾರಿ ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರ ಪಾಲನೆ, ಮಾದರಿಯಾದ್ರು ಭಾಲ್ಕಿ ಜನ...!

By

Published : Apr 10, 2020, 10:32 PM IST

ಬೀದರ್:ಕೋವಿಡ್ -19 ವೈರಸ್ ಸೊಂಕು ನಿಯಂತ್ರಣಕ್ಕೆ ರಾಮಬಾಣವಾಗಿರುವ ಸಾಮಾಜಿಕ ಅಂತರ ಕಾಪಾಡುವಲ್ಲಿ ಭಾಲ್ಕಿ ಜನರು ಮಾದರಿಯಾಗಿದ್ದಾರೆ.

ಒಂದು ಬೀದಿ ಅಂಗಡಿ ಮುಂದೆ ಒಬ್ಬರೆ ತರಕಾರಿ ಖರೀದಿ ಮಾಡುವ ಮೂಲಕ ಲಾಕ್​​ಡೌನ್ ಮೂಲ ಉದ್ದೇಶವನ್ನು ಯಥಾವತ್ತಾಗಿ ಪಾಲನೆ ಮಾಡಿರುವುದು ಕಂಡು ಬಂದಿದೆ. ಜಿಲ್ಲೆಯ ಭಾಲ್ಕಿ ಪಟ್ಟಣದ ಬಸ್ ನಿಲ್ದಾಣವನ್ನು ತಾತ್ಕಾಲಿಕ ತರಕಾರಿ ಮಾರುಕಟ್ಟೆಯಾಗಿ ಪರಿವರ್ತಿಸಲಾಗಿದೆ. ಸ್ಥಳೀಯ ಡಿವೈಎಸ್​​ಪಿ ಡಾ. ದೇವರಾಜ್ ಬಿ ಅವರ ನೇತೃತ್ವದಲ್ಲಿ ಬೀದಿಬದಿ ವ್ಯಾಪಾರಿಗಳು ಸಾಮಾಜಿಕ ಅಂತರ ಕಾಪಾಡುವ ಮೂಲಕ ವ್ಯಾಪಾರ ಮಾಡ್ತಿರುವುದು ಎಲ್ಲರ ಗಮನ ಸೆಳೆದಿದೆ.

ಖಾಲಿ ಇರುವ ಬಸ್ ನಿಲ್ದಾಣದಲ್ಲಿ ಬೆಳಿಗ್ಗೆ 8 ಗಂಟೆಯಿಂದ 11 ಗಂಟೆವರೆಗೆ ತರಕಾರಿ ಖರೀದಿಗೆ ಅವಕಾಶ ಮಾಡಿಕೊಡಲಾಗಿದೆ. ಈ ವೇಳೆ ತರಕಾರಿ ಅಂಗಡಿ ಮುಂದೆ ಬರುವ ಜನರು ಬಿಳಿ ಬಣ್ಣದ ರೌಂಡ್​ ಮಾರ್ಕ್​ನಲ್ಲಿ ನಿಲ್ಲಬೇಕಾಗಿದೆ. ಒಬ್ಬರಾದ ಮೇಲೆ ಮತ್ತೊಬ್ಬರು ತರಕಾರಿ ಖರಿದಿಸಬೇಕು. ಜನಜಂಗುಳಿಯಾಗದಂತೆ ಸ್ಥಳೀಯ ಪೊಲೀಸರೇ ನಿಗಾ ವಹಿಸ್ತಿದ್ದಾರೆ.

ABOUT THE AUTHOR

...view details