ಕರ್ನಾಟಕ

karnataka

By

Published : Dec 6, 2021, 10:56 AM IST

ETV Bharat / state

ಭಾಷಣದ ವೇಳೆ ಗುಸು..ಗುಸು... ಪಿಎಸ್​ಐ ಸೇರಿ ಸಿಬ್ಬಂದಿಗೆ ಹೊರ ಹೋಗಿ ಎಂದು ಸಿಎಂ ಗರಂ

ಭಾಷಣದ ವೇಳೆಯಲ್ಲಿ ಅಶಿಸ್ತಿನಿಂದ ನಡೆದುಕೊಂಡ ಲೇಡಿ ಪಿಎಸ್​ಐ ಸೇರಿ ಇತರೆ ಪೊಲೀಸ್​ ಸಿಬ್ಬಂದಿಯನ್ನು ಹೊರ ಹೋಗಿ ಎಂದು ಸಿಎಂ ಬೊಮ್ಮಾಯಿ ಖಡಕ್​ ಸೂಚನೆ ನೀಡಿದ ಪ್ರಸಂಗ ಬೀದರ್​ ಜಿಲ್ಲೆಯಲ್ಲಿ ನಡೆಯಿತು.

CM Basavaraj Bommai angry on Lady PSI, Bommai angry on police department, CM Bommai visit Bidar, Karnataka council election campaign in bidar, ಮಹಿಳಾ ಪಿಎಸ್​ಐ ಮೇಲೆ ಸಿಎಂ ಬಸವರಾಜ ಬೊಮ್ಮಾಯಿ ಗರಂ, ಪೊಲೀಸ್​ ಇಲಾಖೆ ಮೇಲೆ ಕೋಪಗೊಂಡ ಬೊಮ್ಮಯಿ, ಬೀದರ್​ಗೆ ಭೇಟಿ ನೀಡಿದ ಸಿಎಂ ಬೊಮ್ಮಾಯಿ, ಬೀದರ್​ನಲ್ಲಿ ವಿಧಾನಪರಿಷತ್​ ಚುನಾವಣೆ ಪ್ರಚಾರ,
ಲೇಡಿ ಪಿಎಸ್​ಐ ಸೇರಿ ಸಿಬ್ಬಂದಿಯರನ್ನು ಹೊರ ಹೋಗಿ ಎಂದ ಸಿಎಂ

ಬೀದರ್:'ನಿಮ್ಮಗಳ ಅಗತ್ಯವಿಲ್ಲ. ನಮ್ಮ ಕಾರ್ಯಕರ್ತರು ಎಲ್ಲಾ ನೋಡ್ಕೊಳ್ತಾರೆ. ನೀವು ಹೊರಗೆ ಹೋಗಿ' ಸಮಾವೇಶದ ವೇದಿಕೆಯಲ್ಲೇ ಸಿಎಂ ಬಸವರಾಜ ಬೊಮ್ಮಾಯಿ ಪೊಲೀಸರ ಮೇಲೆ ಗರಂ ಆದ ಘಟನೆ ನಗರದಲ್ಲಿ ನಡೆಯಿತು.

ಇಲ್ಲಿನ ಘಾಳೆ ಪಂಕ್ಷನ್ ಹಾಲ್​ನಲ್ಲಿ ಪರಿಷತ್ ಚುನಾವಣೆ ಪ್ರಚಾರ ಸಭೆಯಲ್ಲಿ ಭಾಷಣ ಮಾಡುತ್ತಿದ್ದಾಗ ಗಸ್ತಿನಲ್ಲಿದ್ದ ಪೊಲೀಸರು ಗುಸು.. ಗುಸು.. ಮಾತನಾಡುತ್ತಿದ್ದ ಶಬ್ದ ಕೇಳಿಸಿದೆ. ಇದರಿಂದ ಗರಂ ಆದ ಸಿಎಂ, ಮಹಿಳಾ ಪಿಎಸ್​ಐ ಸೇರಿ ಪೊಲೀಸ್ ಸಿಬ್ಬಂದಿಯನ್ನು ಹೊರ ಹೋಗುವಂತೆ ತಿಳಿಸಿದರು.


ಸಿಎಂ ಬೊಮ್ಮಾಯಿ ಅವರನ್ನು ಪಕ್ಷದ ಕಾರ್ಯಕರ್ತರು ಸನ್ಮಾನಿಸಲು ವೇದಿಕೆಗೆ ಬರುತ್ತಿರುವುದನ್ನು ತಡೆದ ಪೊಲೀಸರ ವರ್ತನೆ ಹಾಗೂ ಭಾಷಣದ ಆರಂಭಕ್ಕೂ ಮುನ್ನ ಮಹಿಳಾ ಪಿಎಸ್​ಐ ವೇದಿಕೆ ಮೇಲೆ ಅನವಶ್ಯಕವಾಗಿ ಸುತ್ತಾಡುತ್ತಿರುವುದನ್ನು ಸಿಎಂ ಸೂಕ್ಷ್ಮವಾಗಿ ಗಮನಿಸಿದ್ದರು. ಹೀಗಾಗಿ ಭಾಷಣದ ವೇಳೆ ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು.

ABOUT THE AUTHOR

...view details