ಕರ್ನಾಟಕ

karnataka

ETV Bharat / state

ರಸ್ತೆ ಖಾಲಿ ಅಂತಾ ಯುವಕರ ಅಡ್ಡಾದಿಡ್ಡಿ ಬೈಕ್ ಚಾಲನೆ: ಐವರಿಗೆ ಗಂಭೀರ ಗಾಯ - ಬೈಕ್‌ಗಳ ಮಧ್ಯೆ ಅಪಘಾತ

ಒಂದೇ ಬೈಕ್ ಮೇಲೆ ಮೂವರು ಕುಳಿತು ಅಡ್ಡಾದಿಡ್ಡಿಯಾಗಿ ಬೈಕ್ ಚಲಾಯಿಸುತ್ತ ಬಂದ ಯುವಕರು, ಎದುರಿಗೆ ಬಂದ ಮತ್ತೊಂದು ಬೈಕ್(ಬುಲೆಟ್)ಗೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ಐವರು ಗಾಯಗೊಂಡಿದ್ದಾರೆ.

ಗಂಭೀರ ಗಾಯ
ಗಂಭೀರ ಗಾಯ

By

Published : Mar 22, 2020, 11:46 PM IST

ಬಸವಕಲ್ಯಾಣ: ಖಾಲಿ ರಸ್ತೆಯಲ್ಲಿ ಅಡ್ಡಾದಿಡ್ಡಿ ಬೈಕ್ ಚಲಾಯಿಸಿದ ಪರಿಣಾಮ ಎರಡು ಬೈಕ್‌ಗಳ ಮಧ್ಯೆ ಅಪಘಾತ ಸಂಭವಿಸಿ, ಐವರು ಗಂಭೀರವಾಗಿ ಗಾಯಗೊಂಡಿರುವ ಪ್ರಕರಣ ನಗರದ ಹರಳಯ್ಯ ವೃತ್ತದಲ್ಲಿ ನಡೆದಿದೆ.

ನಗರದ ಕೈಕಾಡಿಗಲ್ಲಿಯ ವಿಶ್ವನಾಥ ಅನೀಲ ಮಾನೆ, ಸೋಹೆಲ್, ಸಾಗರ್, ಮಹೇಶ ಘಟನೆಯಲ್ಲಿ ಗಾಯಗೊಂಡ ಯುವಕರು. ಕರ್ಫ್ಯೂ ನಿಮಿತ್ತ ನಗರದ ಮುಖ್ಯ ರಸ್ತೆಯಲ್ಲಿ ಜನ ಸಂಚಾರವಿಲ್ಲದೆ ರಸ್ತೆಗಳೆಲ್ಲ ಖಾಲಿ, ಖಾಲಿಯಾಗಿದ್ದವು. ಈ ವೇಳೆ ಒಂದೇ ಬೈಕ್ ಮೇಲೆ ಮೂವರು ಕುಳಿತು ಅಡ್ಡಾದಿಡ್ಡಿಯಾಗಿ ಬೈಕ್ ಚಲಾಯಿಸುತ್ತ ಬಂದ ಯುವಕರು, ಎದುರಿಗೆ ಬಂದ ಮತ್ತೊಂದು ಬೈಕ್(ಬುಲೆಟ್)ಗೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ಐವರಿಗೆ ಘಟನೆಯಲ್ಲಿ ಗಾಯಗಳಾಗಿದ್ದು, ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಈ ಸಂಬಂಧ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತದಲ್ಲಿ ಗಾಯಗೊಂಡಿರುವ ಯುವಕರನ್ನು ಆಸ್ಪತ್ರೆಗೆ ದಾಖಲಿಸಿದ ಪೊಲೀಸರು

ಮೃತಪಟ್ಟಿದ್ದಾನೆಂದು ಯಾರು ಮುಟ್ಟಲಿಲ್ಲ:

ಘಟನೆಯಲ್ಲಿ ಬುಲೆಟ್ ಮೇಲಿದ್ದ ವಿಶ್ವನಾಥ ಎನ್ನುವ ಯುವಕ ಗಂಭೀರವಾಗಿ ಗಾಯಗೊಂಡು ರಸ್ತೆ ಮೇಲೆ ರಕ್ತದ ಮಡುವಿನಲ್ಲಿ ಬಿದ್ದಿದ್ದ. ಈತ ಮೃತಪಟ್ಟಿದ್ದಾನೆಂದು ಭಾವಿಸಿದ ಜನರು ಮುಟ್ಟುವ ಸಾಹಸ ಮಾಡಲಿಲ್ಲ. ಘಟನೆ ನಡೆದ ಕೆಲ ಸಮಯದ ನಂತರ ಸ್ಥಳಕ್ಕಾಗಮಿಸಿದ ನಗರ ಠಾಣೆ ಪಿಎಸ್‌ಐ ಸುನೀಲಕುಮಾರ ಗಾಯಾಳು ಯುವಕ ಜೀವಂತ ಇರುವುದನ್ನು ಗಮನಿಸಿ, ತಕ್ಷಣ ಸರ್ಕಾರಿ ಆಸ್ಪಪತ್ರೆಗೆ ದಾಖಲಿಸಿದರು.

ABOUT THE AUTHOR

...view details