ಕರ್ನಾಟಕ

karnataka

ಸಚಿವ ಪ್ರಭು ಚೌಹಾಣ್‌ ಅವರೇ, ದಯವಿಟ್ಟು ಕನ್ನಡದಲ್ಲಿ ಮಾತಾಡಿ.. ಅಧಿಕಾರಿಗಳೇ ಕನ್ನಡ ಬರಲ್ವೇ?

By

Published : Feb 25, 2020, 4:58 PM IST

ಔರಾದ್ ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಇಂದು ನಡೆದ ಕೆಡಿಪಿ ಸಭೆಯಲ್ಲಿ ಸಚಿವ ಪ್ರಭು ಚೌಹಾಣ್‌ ತಾಲೂಕು ಅಧಿಕಾರಿಗಳ ಬೆವರಿಳಿಸಿದ್ದಾರೆ. ಆದರೆ, ಅವರು ಸಭೆಯಲ್ಲಿ ಬಹುತೇಕ ಹಿಂದಿಯಲ್ಲಿ ಮಾತಾಡಿದ್ದಾರೆ. ಅದಕ್ಕೆ ಕೆಲ ಅಧಿಕಾರಿಗಳೂ ಸಹ ಹಿಂದಿಯಲ್ಲಿ ಮಾತನಾಡಿರೋದು ಗಮನಾರ್ಹ..

Prabhu Chavana
ಪ್ರಭು ಚವ್ಹಾಣ

ಬೀದರ್ :ಅಧಿಕಾರಿಗಳ ವಿರುದ್ಧ ಪದೇಪದೆ ಕೇಳಿ ಬರ್ತಿರುವ ಲಂಚಾವತಾರದ ಬಗ್ಗೆ ಪಶೋಸಂಗಾಪನಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌಹಾಣ್‌ ಕೆಂಡಕಾರಿದ್ದಾರೆ. ಲಂಚವತಾರದ ಬಗ್ಗೆ ಇನ್ಮೇಲೆ ಯಾವುದೇ ಮುಲಾಜಿಲ್ಲದೇ ಕ್ರಮಕೈಗೊಳ್ಳೋದಾಗಿ ಅಧಿಕಾರಿಗಳಿಗೆ ಗುಡುಗಿದ್ದಾರೆ.

ಕೆಡಿಪಿ ಸಭೆಯಲ್ಲಿ ಸಚಿವ ಪ್ರಭು ಚೌಹಾಣ್..

ಜಿಲ್ಲೆಯ ಔರಾದ್ ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳ ಲಂಚವತಾರದ ಕುರಿತು ತೀವ್ರ ಬೇಸರ ವ್ಯಕ್ತಪಡಿಸಿದ ಸಚಿವರು, ಜನರಿಗೆ ಅನಗತ್ಯ ಮೋಸ ಮಾಡಿ ಕಾಟ ಕೊಟ್ಟರೆ ಸುಮ್ಮನೆ ಇರಲ್ಲ ಅಂತಾ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡರು. ಆದರೆ, ಸಭೆಯುದ್ಧಕ್ಕೂ ಬಹುತೇಕ ಹಿಂದಿಯಲ್ಲೇ ಸಚಿವರು ಮಾತಾಡ್ತಾಯಿದ್ರೇ, ಬಹುಪಾಲು ಅಧಿಕಾರಿಗಳು ಸಹ ಹಿಂದಿಯಲ್ಲಿ ಸಚಿವರಿಗೆ ಉತ್ತರ ಕೊಡ್ತಿದ್ದರು. ಅಪರೂಪಕ್ಕೊಮ್ಮೆ ನಡುವೆ ನಡುವೆ ಸಚಿವರು ಕನ್ನಡ ಪದಗಳನ್ನ ಬಳಸ್ತಿದ್ರೇ, ಅಧಿಕಾರಿಗಳ ಸಹ ಅಲ್ಲೊಬ್ಬ ಇಲ್ಲೊಬ್ಬರು ಕನ್ನಡದಲ್ಲಿ ಉತ್ತರ ನೀಡ್ತಿದ್ದರು.

ಬೇಸಿಗೆ ಕಾಲ ಆರಂಭವಾಗ್ತಿದೆ. ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಳ್ಳಲಿದೆ. ಕೆರೆ-ಕಟ್ಟೆಗಳಲ್ಲಿ ನೀರಿನ ಪ್ರಮಾಣ ಎಷ್ಟಿದೆ? ಮುಂಜಾಗೃತಾ ಕ್ರಮವಾಗಿ ಏನೆಲ್ಲಾ ಕ್ರಮಕೈಗೊಂಡಿದ್ದೀರಾ ಎನ್ನುವುದನ್ನು ಒಂದು ವಾರದಲ್ಲಿ ವರದಿ ನೀಡಬೇಕು ಎಂದರು.

ಅಲ್ಲದೇ ಶಾಲೆ ಅವಧಿಯಲ್ಲಿ ಶಿಕ್ಷಕರು ಕಡ್ಡಾಯವಾಗಿ ಮೊಬೈಲ್ ಬಳಸುವಂತಿಲ್ಲ. ಹಾಗೇನಾದ್ರೂ ಮೊಬೈಲ್ ಬಳಸಿದ್ದೇ ಆದಲ್ಲಿ, ಅಂತಹ ಶಿಕ್ಷಕರನ್ನು ಅಮಾನತು ಮಾಡುವ ಕುರಿತು ತಕ್ಷಣ ಆದೇಶ ಹೊರಡಿಸಲಾಗುವುದು ಎಂದರು. ಇದರಿಂದ ಹತ್ತನೆ ತರಗತಿಯ ಫಲಿತಾಂಶ ಸುಧಾರಣೆಯಾಗಲಿದೆ. ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗೆ ಈ ಕ್ರಮಕೈಗೊಳ್ಳಲಾಗಿದೆ ಎಂದರು.

ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಅರವಿಂದ ಅರಳಿ, ತಾಲೂಕು ಪಂಚಾಯತ ಅಧ್ಯಕ್ಷೆ ಸವಿತಾ ಪಾಟೀಲ್, ತಹಸೀಲ್ದಾರ್​ ಚಂದ್ರಶೇಖರ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

ABOUT THE AUTHOR

...view details