ಕರ್ನಾಟಕ

karnataka

ETV Bharat / state

ಉಗ್ರರ ದಾಳಿ ಭೀತಿ: ಕಾರಂಜಾ ಜಲಾಶಯದ ಸುತ್ತ ಹೈ ಅಲರ್ಟ್ - ಹುಮನಾಬಾದ್ ತಾಲೂಕಿನ ಹಳ್ಳಿಖೆಡ್ ಬಳಿಯ ಕಾರಂಜಾ ಜಲಾಶಯ

ಉಗ್ರರ ದಾಳಿ ಭೀತಿ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಹೈಅಲರ್ಟ್ ಘೋಷಿಸಲಾಗಿದೆ. ಜಿಲ್ಲೆಯ ಹುಮನಾಬಾದ್ ತಾಲೂಕಿನ ಹಳ್ಳಿಖೇಡ್ ಬಳಿಯ ಕಾರಂಜಾ ಜಲಾಶಯದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್​ ಒದಗಿಸಲಾಗಿದೆ.

ಉಗ್ರ ದಾಳಿ ಭೀತಿ: ಕಾರಂಜಾ ಜಲಾಶಯದ ಸುತ್ತ ಹೈ ಅಲರ್ಟ್

By

Published : Aug 18, 2019, 10:35 PM IST

Updated : Aug 18, 2019, 11:31 PM IST

ಬೀದರ್:ಉಗ್ರರ ದಾಳಿ ಭೀತಿ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಹೈ ಅಲರ್ಟ್ ಘೊಷಣೆ ಮಾಡಲಾಗಿದ್ದು, ಜಿಲ್ಲೆಯ ಹುಮನಾಬಾದ್ ತಾಲೂಕಿನ ಹಳ್ಳಿಖೇಡ್ ಬಳಿಯ ಕಾರಂಜಾ ಜಲಾಶಯದ ಸುತ್ತಲು ಸಹ ಪೊಲೀಸು ಹದ್ದಿನ ಕಣ್ಣಿಟ್ಟಿದ್ದಾರೆ.

ಉಗ್ರ ದಾಳಿ ಭೀತಿ: ಕಾರಂಜಾ ಜಲಾಶಯದ ಸುತ್ತ ಹೈ ಅಲರ್ಟ್

ಅಲ್ಲದೇ ವಾಯು ತರಬೇತಿ ಕೇಂದ್ರ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಸೇರಿದಂತೆ ಹೆಚ್ಚು ಜನಸಂದಣಿ ಇರುವ ಸ್ಥಳಗಳಲ್ಲಿ ಪೊಲೀಸ್​ ಭದ್ರತೆ ನಿಯೋಜಿಸಲಾಗಿದೆ. ಬೀದರ್​ ಜಿಲ್ಲೆಯು ತೆಲಂಗಾಣ ಹಾಗೂ ಮಹಾರಾಷ್ಟ್ರ ಗಡಿ ಭಾಗವಾಗಿದ್ದು, ಗಡಿಭಾಗದ ನಾಲ್ಕು ದಿಕ್ಕುಗಳಲ್ಲೂ ಹೆಚ್ಚು ಅರಣ್ಯ ಪ್ರದೇಶವಾಗಿದ್ದರಿಂದ ಪೊಲೀಸರು ಸಾಕಷ್ಟು ಅಲರ್ಟ್​ ಆಗಿದ್ದಾರೆ. ಇಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ. ಶ್ರೀಧರ್ ಹಾಗೂ ಭಾಲ್ಕಿ ಡಿವೈಎಸ್ಪಿ ವೆಂಕನಗೌಡ ಪಾಟೀಲ್ ಭೇಟಿ ನೀಡಿ ಪರೀಶೀಲನೆ ನಡೆಸಿದ್ರು.

ಹೈ ಅಲರ್ಟ್ ಹಿನ್ನೆಲೆಯಲ್ಲಿ ಕಾರಂಜಾ ಜಲಾಶಯಕ್ಕೆ ಆಗಮಿಸುವ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಇನ್ನು ಮುಂಜಾಗ್ರತ ಕ್ರಮವಾಗಿ ಶ್ವಾನದಳ ಸಹ ಆಗಮಿಸಿ, ಜಲಾಶಯದ ಸುತ್ತಲೂ ಪರಿಶೀಲನೆ ನಡೆಸಿದ್ದಾರೆ.

Last Updated : Aug 18, 2019, 11:31 PM IST

ABOUT THE AUTHOR

...view details