ಕರ್ನಾಟಕ

karnataka

ETV Bharat / state

ಬೀದರ್‌: ಗ್ಯಾಸ್ ಕಟ್ಟರ್​ ಬಳಸಿ ಎಟಿಎಂನಿಂದ ಹಣ ಲೂಟಿ - ಎಟಿಎಂನಲ್ಲಿ ಹಣ ದರೋಡೆ

ದುಷ್ಕರ್ಮಿಗಳು ಬೀದರ್‌ನ ಎಟಿಎಂವೊಂದರಿಂದ ಸುಮಾರು ಹಣ ಕದ್ದು ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ. ​

ಎಟಿಎಂನಲ್ಲಿ ಹಣ ದರೋಡೆ
ಎಟಿಎಂನಲ್ಲಿ ಹಣ ದರೋಡೆ

By ETV Bharat Karnataka Team

Published : Oct 12, 2023, 8:22 PM IST

Updated : Oct 12, 2023, 9:54 PM IST

ಗ್ಯಾಸ್ ಕಟ್ಟರ್​ ಬಳಸಿ ಎಟಿಎಂನಿಂದ ಹಣ ದರೋಡೆ

ಬೀದರ್ : ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿರುವ ಕಳ್ಳರ ಗ್ಯಾಂಗ್ ಗ್ಯಾಸ್ ಕಟ್ಟರ್ ಬಳಸಿ ಕರ್ನಾಟಕ ಬ್ಯಾಂಕ್​ನ ಎಟಿಎಂನಲ್ಲಿದ್ದ ಹಣ ಲೂಟಿ ಮಾಡಿರುವ ಘಟನೆ ಬಸವಕಲ್ಯಾಣ ತಾಲೂಕಿನಲ್ಲಿ ನಡೆದಿದೆ. ಇಂದು ನಸುಕಿನ ಜಾವ 4 ಗಂಟೆಯ ಸುಮಾರಿಗೆ XUV ಕಾರ್​ನಲ್ಲಿ ಬಂದ ತಂಡ
ಕೇವಲ 10 ನಿಮಿಷದಲ್ಲಿ ಎಟಿಎಂ ಮಷಿನ್​ ತುಂಡರಿಸಿ ಕೃತ್ಯ ಎಸಗಿದೆ.

ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಕೃತ್ಯ ಎಸಗಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಬಸವಕಲ್ಯಾಣದಿಂದ ಬಂಗ್ಲಾ ಮಾರ್ಗವಾಗಿ ಮಹಾರಾಷ್ಟ್ರ ಉಮ್ಮರ್ಗಾ ಕಡೆಗೆ ಆರೋಪಿಗಳು ತೆರಳಿದ್ದಾರೆ. ಸ್ಥಳಕ್ಕೆ ಬಸವಕಲ್ಯಾಣ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಕಳ್ಳರ ಪತ್ತೆಗೆ ಕಾರ್ಯಾಚರಣೆ ಕೈಗೊಂಡಿದ್ದಾರೆ.

ಎಟಿಎಂ ಯಂತ್ರದಿಂದ ಹಣ ದೋಚಿದ ಕಳ್ಳರು: ಕೆಲವು ತಿಂಗಳ ಹಿಂದೆ ತುಮಕೂರು ಎಸ್​ಪಿ ಕಚೇರಿ ಪಕ್ಕದಲ್ಲಿನ ಬ್ಯಾಂಕ್ ಆಫ್ ಇಂಡಿಯಾ ಶಾಖೆಗೆ ಸೇರಿದ ಎಟಿಎಂ ಯಂತ್ರದಿಂದ ಕಳ್ಳರು ಹಣ ದೋಚಿದ್ದರು. ಸುಮಾರು 2,90,000 ನಗದಿನೊಂದಿಗೆ ಪರಾರಿಯಾಗಿದ್ದರು. ಯಂತ್ರವನ್ನು ಗ್ಯಾಸ್ ಕಟರ್ ಬಳಸಿ ತುಂಡರಿಸಿದ್ದರು. ಸ್ಥಳಕ್ಕೆ ಡಿವೈಎಸ್ಪಿ ಶ್ರೀನಿವಾಸ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಬ್ಯಾಂಕ್‌ನ ಸಿಸಿಟಿವಿ ಕ್ಯಾಮರಾದಲ್ಲಿ ಕೃತ್ಯ ಸೆರೆಯಾಗಿತ್ತು. ಎನ್ಎಪಿಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಐಸಿಐಸಿಐ ಬ್ಯಾಂಕ್ ಎಟಿಎಂ ಹಣ ದರೋಡೆ: ಜುಲೈ 5ರಂದು ಪರಪ್ಪನ ಅಗ್ರಹಾರ ವ್ಯಾಪ್ತಿಯಲ್ಲಿರುವ ಐಸಿಐಸಿಐ ಬ್ಯಾಂಕ್‌ನ ಎಟಿಎಂ ಯಂತ್ರದಿಂದ 24 ಲಕ್ಷ ರೂ. ದೋಚಲಾಗಿತ್ತು. ಜು.5ನೇ ತಾರೀಕಿನಂದು ಸಿಎಂಎಸ್ ಕಂಪನಿಯ ಕಸ್ಟೋಡಿಯನ್ ಸಿಬ್ಬಂದಿ ಐಸಿಐಸಿಐ ಬ್ಯಾಂಕ್ ಎಟಿಎಂ ಯಂತ್ರಕ್ಕೆ ಹಣ ತುಂಬಿಸಿದ್ದರು. ಕಸ್ಟೋಡಿಯನ್ ಸಿಬ್ಬಂದಿ ತೆರಳಿದ್ದ ಕೆಲವೇ ನಿಮಿಷದಲ್ಲಿ ಎಟಿಎಂನಲ್ಲಿದ್ದ ಹಣ ಕಳ್ಳತನವಾಗಿತ್ತು.

ಹೆಲ್ಮೆಟ್ ಧರಿಸಿ ಬಂದಿದ್ದ ಕಳ್ಳರು ಸಲೀಸಾಗಿ ಎಟಿಎಂನ ಸೇಫ್ಟಿ ಡೋರ್ ತೆರೆದು ಹಣ ಕಳ್ಳತನ ಮಾಡಿದ್ದರು. ಕಸ್ಟೋಡಿಯನ್ ಕಂಪನಿ ವತಿಯಿಂದ ಹಣ ತುಂಬಿಸಲು ಬಂದಿದ್ದ ಅರುಳ್, ಉದ್ದೇಶಪೂರ್ವಕವಾಗಿಯೇ ಸೇಫ್ಟಿ ಡೋರ್ ಸರಿಯಾಗಿ ಕ್ಲೋಸ್ ಮಾಡದೇ ತೆರಳಿದ್ದ. ಬಳಿಕ ಈ ಮಾಹಿತಿಯನ್ನು ತನ್ನ ತಂಡಕ್ಕೆ ತಿಳಿಸಿದ್ದಾನೆ. ನಂತರ ಸ್ಥಳಕ್ಕೆ ಬಂದಿದ್ದ ನದೀಂ, ಮಹೇಶ್ ಹಾಗೂ ಶ್ರೀರಾಮ್ ಎಟಿಎಂನಲ್ಲಿದ್ದ ಹಣ ದೋಚಿ ಪರಾರಿಯಾಗಿದ್ದರು. ಕಳ್ಳತನದ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಕಸ್ಟೋಡಿಯನ್ ಕಂಪನಿ ಸಿಬ್ಬಂದಿಯ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹೊರ ರಾಜ್ಯಗಳಿಗೆ ತೆರಳಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.

ಇದನ್ನೂ ಓದಿ:ಬೆಂಗಳೂರಲ್ಲಿ ಹಾಡಹಗಲೇ ಜ್ಯುವೆಲ್ಲರಿ ಶಾಪ್​ ಮಾಲೀಕನ ಮೇಲೆ ಗುಂಡಿನ ದಾಳಿ: ಒಂದು ಕೆಜಿ ಚಿನ್ನದೊಂದಿಗೆ ದರೋಡೆಕೋರರು ಪರಾರಿ!

Last Updated : Oct 12, 2023, 9:54 PM IST

ABOUT THE AUTHOR

...view details