ಕರ್ನಾಟಕ

karnataka

ETV Bharat / state

ಮನೆ ಕಟ್ಟಲು ಕೂಡಿಟ್ಟ 5.50 ಲಕ್ಷ ರೂ. ಕಳ್ಳರ ಪಾಲು, ಶಿಕ್ಷಕ ಕಂಗಾಲು - money theft in bidar

ಶಿಕ್ಷಕರೊಬ್ಬರು ಬ್ಯಾಂಕ್​ನಿಂದ ಡ್ರಾ ಮಾಡಿ ಸ್ಕೂಟಿಯ ಡಿಕ್ಕಿಯಲ್ಲಿ ಲಾಕ್ ಮಾಡಿಟ್ಟ 5.50 ಲಕ್ಷ ರೂ.ಗಳನ್ನು ಕಳ್ಳರು ಎಗರಿಸಿರುವ ಘಟನೆ ಬೀದರ್​ನಲ್ಲಿ ನಡೆದಿದೆ. ಹಣ ಕಳೆದುಕೊಂಡು ಶಿಕ್ಷಕ ದಿಕ್ಕು ಕಾಣದೆ ಕಂಗಾಲಾಗಿದ್ದಾರೆ.

ಮನೆ ಕಟ್ಟಲು ಕೂಡಿಟ್ಟ 5.50 ಲಕ್ಷ ರೂ. ಕಳ್ಳರ ಪಾಲು

By

Published : Sep 30, 2019, 9:38 PM IST

ಬೀದರ್:ಕನಸಿನ ಮನೆ ಕಟ್ಟಲು ಕೂಡಿಟ್ಟ 5.50 ಲಕ್ಷ ರೂಪಾಯಿ ಹಣ ನೋಡ- ನೋಡುತ್ತಲೇ ಖದೀಮರ ಪಾಲಾಗಿದ್ದು, ಕಂಗೆಟ್ಟ ಶಿಕ್ಷಕ ದಿಕ್ಕು ಕಾಣದೆ ಕಂಗಾಲಾಗಿದ್ದಾರೆ.

ನಗರದ ಕೆನರಾ ಬ್ಯಾಂಕ್ ಎದುರಲ್ಲಿ ಕಳ್ಳತನ ನಡೆದಿದ್ದು, ತಾಲೂಕಿನ ಕಮಠಾಣ ಗ್ರಾಮದ ಯುಸೂಫ್​ ಮಿಯ್ಯಾ ಎಂಬ ಶಿಕ್ಷಕ ಡಿಸಿಸಿ ಬ್ಯಾಂಕ್​ನಲ್ಲಿ ಕೂಡಿಟ್ಟ ಹಣವನ್ನು ಇಂದು ಡ್ರಾ ಮಾಡಿದ್ದಾರೆ. ಪತ್ನಿಯೊಂದಿಗೆ ಬಂದ ಇವರು, ಹಣವನ್ನು ತಮ್ಮ ಸ್ಕೂಟಿಯ ಡಿಕ್ಕಿಯಲ್ಲಿ ಲಾಕ್ ಮಾಡಿಟ್ಟು, ನಗರದ ಕೆನರಾ ಬ್ಯಾಂಕ್​ನಲ್ಲಿ ಮಕ್ಕಳ ವಿದ್ಯಾರ್ಥಿ ವೇತನ ಜಮಾ ಆಗಿದೆಯಾ ಎಂದು ನೋಡಲು ಹೋಗಿದ್ದಾರೆ. ಈ ವೇಳೆ ಕಳ್ಳರು ಕೈ ಚಳಕ ತೋರಿಸಿ, ಸ್ಕೂಟಿ ಡಿಕ್ಕಿಯಲ್ಲಿದ್ದ ಬರೋಬ್ಬರಿ 5.50 ಲಕ್ಷ ರೂ. ನಗದು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.

ಮನೆ ಕಟ್ಟಲು ಕೂಡಿಟ್ಟ 5.50 ಲಕ್ಷ ರೂ. ಕಳ್ಳರ ಪಾಲು

ಸ್ಥಳಕ್ಕೆ ನ್ಯೂಟೌನ್ ಪಿಎಸ್​ಐ ಗುರು ಪಾಟೀಲ್ ಭೇಟಿ ನೀಡಿದ್ದು, ಹಾಡಹಗಲೇ ನಡೆದ ಕಳ್ಳತನ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಇತ್ತ ಹಣ ಕಳೆದುಕೊಂಡ ಯುಸೂಫ್ ಮಿಯ್ಯಾ ಕಂಗಾಲಾಗಿ ಹೋಗಿದ್ದಾರೆ.

ABOUT THE AUTHOR

...view details