ಕರ್ನಾಟಕ

karnataka

By

Published : Sep 16, 2020, 10:46 PM IST

ETV Bharat / state

ಎರಡು ಪ್ರತ್ಯೇಕ ಅಬಕಾರಿ ದಾಳಿ: 37 ಕೆಜಿ ಗಾಂಜಾ ಜಪ್ತಿ, ಇಬ್ಬರು ಆರೋಪಿಗಳ ಬಂಧನ

ಗಾಂಜಾ ಘಾಟು ಹಿಡಿದುಬಂದ ಅಬಕಾರಿ ಇಲಾಖೆಯ ಪೊಲೀಸರು ಪ್ರತ್ಯೇಕ ಎರಡು ಕಡೆ ದಾಳಿ ಮಾಡಿ ಒಟ್ಟು 37 ಕೆಜಿ ತೂಕದ ಗಾಂಜಾ ಜಪ್ತಿ ಮಾಡಿ, ಇಬ್ಬರನ್ನು ಬಂಧಿಸಿದ್ದಾರೆ.

37kg ganja seize by Excise Department; Two accused arrested
ಬಂಧಿತ ಆರೋಪಿ

ಬೀದರ್ : ಕಬ್ಬಿನ ಗದ್ದೆಯಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿರುವ ಅಬಕಾರಿ ಇಲಾಖೆಯ ಪೊಲೀಸರು ಆತನಿಂದ 32 ಕೆಜಿ ಗಾಂಜಾ ಬೆಳೆಯನ್ನು ಜಪ್ತಿ ಮಾಡಿಕೊಂಡಿದ್ದಾರೆ.

ಬಂಧಿತ ಆರೋಪಿ

ಹುಮನಾಬಾದ್ ತಾಲೂಕಿನ ಜಲಸಂಗಿ ಗ್ರಾಮದ ಮಹಬೂಬ್ ಪಟೇಲ್ ಎಂಬಾತನ ಗದ್ದೆಯಲ್ಲಿ ಈ ಪ್ರಮಾಣದ ಅಕ್ರಮ ಗಾಂಜಾ ಬೆಳೆಯಲಾಗಿತ್ತು. ಸುದ್ದಿ ತಿಳಿದು ಅಬಕಾರಿ ಇಲಾಖೆಯ ಪೊಲೀಸರು ದಾಳಿ ಮಾಡಿದ್ದಾರೆ.

ಅಲ್ಲದೆ ಬೀದರ್-ಕಲಬುರಗಿ ಹೆದ್ದಾರಿ ಜಲಸಂಗಿ ಕ್ರಾಸ್ ಬಳಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಬಸವಕಲ್ಯಾಣ ತಾಲೂಕಿನ ಘಾಟಹಿಪ್ಪರಗಾ ಗ್ರಾಮದ ಜಯಪ್ರಕಾಶ ಪೋಸ್ತೆ ಎಂಬಾತನನನ್ನು ಬಂಧಿಸಿದ ಪೊಲೀಸರು, ಆತನಿಂದ 4.5 ಕೆಜಿ ಗಾಂಜಾ ಜಪ್ತಿ ಮಾಡಿಕೊಂಡಿದ್ದಾರೆ.

ಬಂಧಿತ ಆರೋಪಿ

ಅಬಕಾರಿ ಜಿಲ್ಲಾಧಿಕಾರಿ ಮಂಜುನಾಥ್ ಅವರ ಮಾರ್ಗದರ್ಶನದಲ್ಲಿ ಡಿವೈಎಸ್​ಪಿ ಅನೀಲಕುಮಾರ್ ಪೊದ್ದಾರ್, ಇನ್ಸ್​ಪೆಕ್ಟರ್​​ ದೇವಿದಾಸ ಭೋಸ್ಲೆ, ಪಿಎಸ್​ಐ ಜೆಟೆಪ್ಪ ಅವರ ನೇತೃತ್ವದಲ್ಲಿ ಸಿಬ್ಬಂದಿ ದಾಳಿ ನಡೆಸಿದ್ದಾರೆ.

ABOUT THE AUTHOR

...view details