ಕರ್ನಾಟಕ

karnataka

By

Published : Jan 16, 2020, 12:34 PM IST

ETV Bharat / state

17 ಜನ ಶಾಸಕರ ಚಿಂತೆ ಬಿಡಿ, ಅನುದಾನ ಬಳಕೆ ಯೋಚನೆ ಮಾಡಿ:  ಸರ್ಕಾರಕ್ಕೆ ಕಾಶೆಂಪೂರ್ ಟಾಂಗ್​

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು 17 ಜನ ಶಾಸಕರಿಗೆ ಸಚಿವ ಸ್ಥಾನ ಅದೆಂಗೆ ಮ್ಯಾನೇಜ್ ಮಾಡಬೇಕು ಎಂಬ ಚಿಂತೆ ಬಿಟ್ಟು, ಕಳೆದ ಎರಡು ವರ್ಷಗಳಲ್ಲಿ ಬಜೆಟ್ ನಲ್ಲಿ ಘೋಷಣೆಯಾದ ಅನುದಾನದ ಬಳಕೆ ಕುರಿತು ಯೋಚನೆ ಮಾಡುವಂತೆ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಜೆಡಿಎಸ್ ಮುಖಂಡ ಬಂಡೆಪ್ಪ ಕಾಶೆಂಪೂರ್ ಟೀಕಿಸಿದ್ದಾರೆ.

KN_BDR_02_16_BANDEPPA KASHEMPUR_7203280_AVB_
17 ಜನ ಶಾಸಕರ ಚಿಂತೆ ಬಿಡಿ, ಬಜೇಟ್ ನಲ್ಲಿದ್ದ ಅನುದಾನ ಬಳಕೆಯ ಯೋಚನೆ ಮಾಡಿ: ಬಂಡೆಪ್ಪ ಕಾಶೆಂಪೂರ್ ಟೀಕೆ

ಬೀದರ್:ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು 17 ಜನ ಶಾಸಕರಿಗೆ ಸಚಿವ ಸ್ಥಾನ ಅದೆಂಗೆ ಮ್ಯಾನೇಜ್ ಮಾಡಬೇಕು ಎಂಬ ಚಿಂತೆ ಬಿಟ್ಟು, ಕಳೆದ ಎರಡು ವರ್ಷಗಳಲ್ಲಿ ಬಜೆಟ್ ನಲ್ಲಿ ಘೋಷಣೆಯಾದ ಅನುದಾನದ ಬಳಕೆ ಕುರಿತು ಯೋಚನೆ ಮಾಡುವಂತೆ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಜೆಡಿಎಸ್ ಮುಖಂಡ ಬಂಡೆಪ್ಪ ಕಾಶೆಂಪೂರ್ ಸಲಹೆ ನೀಡಿದ್ದಾರೆ.

17 ಜನ ಶಾಸಕರ ಚಿಂತೆ ಬಿಡಿ, ಬಜೇಟ್ ನಲ್ಲಿದ್ದ ಅನುದಾನ ಬಳಕೆಯ ಯೋಚನೆ ಮಾಡಿ: ಬಂಡೆಪ್ಪ ಕಾಶೆಂಪೂರ್ ಟೀಕೆ
ಮೈತ್ರಿ ಸರ್ಕಾರದ ಬಜೆಟ್ ನಲ್ಲಿ ಬೀದರ್ ಜಿಲ್ಲೆಯ ನೀರಾವರಿ ಅಭಿವೃದ್ಧಿಗೆ 300 ಕೋಟಿ ರುಪಾಯಿ ಅನುದಾನ ಘೋಷಣೆ ಮಾಡಲಾಗಿತ್ತು. ಆದ್ರೆ ಈಗ ಮತ್ತೆ ಬಜೆಟ್ ಮಂಡನೆ ಕಾಲ ಬಂದರೂ ಇಲ್ಲಿಯವರೆಗೆ ಮಿಸಲಿಟ್ಟ ಅನುದಾನದ ಬಳಕೆಯಾಗಿಲ್ಲ. ಟೆಂಡರ್ ಕರೆದಿಲ್ಲ ಅಭಿವೃದ್ಧಿ ಆಗಿಲ್ಲ ಎಂದು ಅಸಮಾಧಾನ ಹೊರ ಹಾಕಿದರು. 2017-18 ಮತ್ತು 2018-19 ನೇ ಸಾಲಿನ ಆಯವ್ಯಯ ದಲ್ಲಿ ಹಳೆ ಸರ್ಕಾರ ಘೋಷಣೆ ಮಾಡಿದ ಅನುದಾನ ಬಳಸಿಕೊಂಡು ಈ ಭಾಗದ ಅಭಿವೃದ್ಧಿ ಮಾಡಬೇಕು. ಈ ನಿಟ್ಟಿನಲ್ಲಿ ಸಿಎಂ ಬಿ.ಎಸ್ ಯಡಿಯೂರಪ್ಪ ಚಿಂತೆ ಮಾಡಬೇಕಿದೆ. ಅದನ್ನ ಬಿಟ್ಟು 17 ಜನ ಶಾಸಕರ ಚಿಂತೆಯಲ್ಲೇ ಕಾಲ ಹರಣ ಮಾಡ್ತಿದ್ದಾರೆ. ಆ ಶಾಸಕರನ್ನು ನಾವೇನ್ ಕರಕೊಳ್ತಿಲ್ಲ. ನಿಮ್ಮ ಶಾಸಕರು ನಿಮ್ಮ ಹತ್ರಾನೆ ಇರ್ತಾರೆ ಎಂದರು.

For All Latest Updates

TAGGED:

ABOUT THE AUTHOR

...view details