ಕರ್ನಾಟಕ

karnataka

‘ನಮಗಿಲ್ಲಿ ಏನ್ ನಡೀತಿದೆ ಅಂತಾನೂ ಗೊತ್ತಿಲ್ಲ’... ಪ್ರತಿಭಟನೆಗೆ ಬಂದೋರು ಹೀಗೆ ಅನ್ನೋದಾ..?!

ವಿಜಯನಗರ ಪ್ರತ್ಯೇಕ ಜಿಲ್ಲೆ ರಚನೆ ವಿರೋಧಿ ಹೋರಾಟಕ್ಕೆ ಎಂದು ಬಂದಿದ್ದ ಮಹಿಳೆಯರು ತಮ್ಮ ಸಮಸ್ಯೆಗಳ ಈಡೇರಿಸುವಂತೆ ಕೇಳಿಕೊಳ್ಳುತ್ತಿದ್ದರು. ನಮಗಿಲ್ಲಿ ಏನು ನಡೀತಿದೆ ಅಂತಾನೂ ಗೊತ್ತಿಲ್ಲ ಎಂದು ಅಸಹಾಯಕತೆ ತೋಡಿಕೊಂಡಿದ್ದಾರೆ.

By

Published : Nov 23, 2020, 1:36 PM IST

Published : Nov 23, 2020, 1:36 PM IST

Women says we don't know what happening here who came for protest
ಪ್ರತಿಭಟನೆಗೆ ಬಂದಿದ್ದ ಮಹಿಳೆಯರು

ಬಳ್ಳಾರಿ: ವಿಜಯನಗರ ಪ್ರತ್ಯೇಕ ಜಿಲ್ಲೆ ರಚನೆ ವಿರೋಧಿ ಹೋರಾಟಕ್ಕೆ ಈ ದಿನ ಕನ್ನಡ ಒಕ್ಕೂಟವು ಕರೆ ನೀಡಿತ್ತು. ಆದರೆ, ಈ ಹೋರಾಟದಲ್ಲಿ ಭಾಗಿಯಾದ ಮಹಿಳೆಯರು ಹೇಳೋದೇ ಬೇರೆ.

ಪ್ರತಿಭಟನೆಗೆಂದು ಆಗಮಿಸಿದ್ದ ಮಹಿಳೆಯರೊಂದಿಗೆ ಈಟಿವಿ ಭಾರತ ಸಂದರ್ಶನ ನಡೆಸಿದ್ದು, ಆ ಮಹಿಳೆಯರು ಹೇಳೋದೇ ಬೇರೆ. ನಗರೂರು ನಾರಾಯಣರಾವ್ ಉದ್ಯಾನದಲ್ಲಿ ನೆರೆದಿದ್ದ ಟೀಚರ್ಸ್ ಕಾಲೊನಿಯ ಹಿಂಭಾಗದಲ್ಲಿ ಜನತಾ ಗ್ಯಾರೇಜ್ ಕಾಲೋನಿಯ ನಿವಾಸಿಗಳಿಗೆ ಈ ಪ್ರತಿಭಟನೆ ಸ್ವರೂಪವೇ ತಿಳಿದಿಲ್ಲ.

‘ನಮಗಿಲ್ಲಿ ಏನ್ ನಡೀತಿದೆ ಅಂತಾನೂ ಗೊತ್ತಿಲ್ಲ’...ಪ್ರತಿಭಟನೆಗೆ ಬಂದೋರು ಹೀಗ್ ಅನ್ನೋದಾ..!

ನಮಗೆ ರಸ್ತೆ ಬೇಕು, ನೀರು ಬೇಕು, ಒಳಚರಂಡಿ ವ್ಯವಸ್ಥೆ ಬೇಕು, ನಾವು ಗುಡಿಸಲಲ್ಲಿ ಇದ್ದೇವೆ ನಮಗೆ ಮನೆ ಬೇಕು ಎಂಬಿತ್ಯಾದಿ ಸಮಸ್ಯೆ ಹೇಳಿಕೊಳ್ಳುತ್ತಿದ್ದಾರೆ. ಈ ಎಲ್ಲ ಬೇಡಿಕೆ ಈಡೇರಿಸುವವರೆಗೂ ಪ್ರತಿಭಟನೆ ನಿಲ್ಲಿಸಲ್ಲ ಎಂದಿದ್ದಾರೆ.

ನಮಗೆ ಸ್ಲಂ ನಿವಾಸಿಗಳ ಕಾಲೊನಿಯನ್ನಾಗಿ ಮೇಲ್ದರ್ಜೆಗೆ ಏರಿಸಿಕೋಡೋದಾಗಿ ಹೇಳಿ ಇಲ್ಲಿಗೆ ಕರೆದುಕೊಂಡು ಬಂದಿದ್ದಾರೆ. ಇಲ್ಲಿ ಏನ್ ನಡೀತಾ ಇದೆ ಅಂತಾನೂ ಗೊತ್ತಿಲ್ಲ ಎಂದು ಮಹಿಳೆಯರು ತಿಳಿಸಿದ್ದಾರೆ.

ABOUT THE AUTHOR

...view details