ಕರ್ನಾಟಕ

karnataka

ETV Bharat / state

ರೈತ ವಿರೋಧಿ ಆನಂದ್​​ ಸಿಂಗ್​ ಪರ ಹೇಗೆ ಪ್ರಚಾರ ಮಾಡುತ್ತೀರಿ: ಶ್ರೀರಾಮುಲುಗೆ ಉಗ್ರಪ್ಪ ಪ್ರಶ್ನೆ

ಆನಂದ್​ ಸಿಂಗ್​ ರೈತ ವಿರೋಧಿ ಎಂದು ತಾವೇ ಹೇಳಿದ್ದೀರಿ. ಈಗ ಅದೇ ರೈತ ವಿರೋಧಿ ಪರ ಹೇಗೆ ಪ್ರಚಾರ ಮಾಡುತ್ತಿದ್ದೀರಾ ಎಂದು ಸಚಿವ ಶ್ರೀರಾಮುಲುಗೆ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಪ್ರಶ್ನಿಸಿದ್ದಾರೆ.

By

Published : Nov 18, 2019, 1:48 PM IST

ಶ್ರೀರಾಮುಲು ವಿರುದ್ಧ ಉಗ್ರಪ್ಪ ಕಿಡಿ

ಬಳ್ಳಾರಿ: ಜಿಲ್ಲೆಯ ವಿಜಯನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಅನರ್ಹ ಶಾಸಕ ಆನಂದ್​ ಸಿಂಗ್ ರೈತ ವಿರೋಧಿಯಾಗಿದ್ದಾರೆ‌. ಅವರನ್ನು ಚುನಾವಣೆಯಲ್ಲಿ ಸೋಲಿಸಿ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹೇಳಿದ್ದಾರೆ.

ಬಳ್ಳಾರಿಯ ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರೇ ಆನಂದ್​ ಸಿಂಗ್ ರೈತ ವಿರೋಧಿ ಎಂದು ಹೇಳಿದ್ದಾರೆ. ಈಗ ಅದೇ ರೈತ ವಿರೋಧಿಗೆ ಯಾವ ಮುಖ ಇಟ್ಟುಕೊಂಡು ಮತ ಕೇಳುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಶ್ರೀರಾಮುಲು ವಿರುದ್ಧ ಉಗ್ರಪ್ಪ ಕಿಡಿ

ಐಎಸ್​​ಆರ್ ಸಕ್ಕರೆ ಕಾರ್ಖಾನೆ ಬಂದ್ ಮಾಡಿರುವುದನ್ನು ಖಂಡಿಸಿ ಕೈಗೊಂಡಿದ್ದ ರೈತರ ಪ್ರತಿಭಟನೆಯಲ್ಲಿ ಸ್ವತಃ ಶ್ರೀರಾಮುಲು ಅವರೇ ಭಾಗಿಯಾಗಿ, ಆನಂದ್​ ಸಿಂಗ್​ ರೈತ ವಿರೋಧಿ ಎಂದು ಜರಿದಿದ್ದರು. ಆಗ ಅವರು ರಾಜಕೀಯವಾಗಿ ಆ ಮಾತನ್ನು ಹೇಳಿರಬಹುದು. ಆದರೆ ಈಗ ‌ಅದೇ ರೈತ ವಿರೋಧಿ ವ್ಯಕ್ತಿಯನ್ನ ಸೋಲಿಸಿ ಎಂದು ಹೇಳಿದರು. ಸಚಿವ ಶ್ರೀರಾಮುಲು ರಾಜಕೀಯವಾಗಿ ಗುರುತಿಸಿಕೊಂಡವರು. ಆದ್ದರಿಂದ ರೈತಾಪಿ ವರ್ಗದವರೊಂದಿಗೆ ಈ ರೀತಿಯ ಚೆಲ್ಲಾಟ ಆಡಬಾರದು. ವಿಜಯನಗರ ಕ್ಷೇತ್ರದ ಮತದಾರರು ಬಹಳ ಪ್ರಬುದ್ಧರು. ಈ ಬಾರಿ ಉತ್ತಮ ಫಲಿತಾಂಶ ನೀಡಲಿದ್ದಾರೆಂಬ ನಿರೀಕ್ಷೆಯಲ್ಲಿರುವೆ ಎಂದರು.

For All Latest Updates

TAGGED:

ABOUT THE AUTHOR

...view details