ಕರ್ನಾಟಕ

karnataka

By

Published : Dec 27, 2020, 1:25 PM IST

ETV Bharat / state

ಮತದಾನ ಜಾಗೃತಿ ರಾಯಭಾರಿಯಾಗಿದ್ದ ಎರಡೂ ಕೈಗಳಿಲ್ಲದ ಲಕ್ಷ್ಮೀ ಅವರಿಂದ ಮತದಾನ

ಎರಡೂ ಕೈಗಳಿಲ್ಲದ ಲಕ್ಷ್ಮೀ ಎಂಬುವರು ಮತದಾನ ಮಾಡಿ ತಮ್ಮ ಹಕ್ಕನ್ನು ಚಲಾಯಿಸಿರುವ ಘಟನೆ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾನಾಹೊಸಳ್ಳಿ ಸಮೀಪದ ಗುಂಡುಮುಣುಗು ಗ್ರಾಮದಲ್ಲಿ ನಡೆದಿದೆ.

Voting by disabled Laxmi who was ambassador of voting awareness
ಮತದಾನ ಜಾಗೃತಿ ರಾಯಭಾರಿಯಾಗಿದ್ದ ಎರಡೂ ಕೈಗಳಿಲ್ಲದ ಲಕ್ಷ್ಮೀ ಅವರಿಂದ ಮತದಾನ

ಬಳ್ಳಾರಿ:ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾನಾಹೊಸಳ್ಳಿ ಸಮೀಪದ ಗುಂಡುಮುಣುಗು ಗ್ರಾಮದ ಎರಡೂ ಕೈಗಳಿಲ್ಲದ ಲಕ್ಷ್ಮೀ ಎಂಬುವರು ಮತದಾನ ಮಾಡಿ ತಮ್ಮ ಹಕ್ಕನ್ನು ಚಲಾಯಿಸಿದರು.

ಮತದಾನ ಜಾಗೃತಿ ರಾಯಭಾರಿಯಾಗಿದ್ದ ಎರಡೂ ಕೈಗಳಿಲ್ಲದ ಲಕ್ಷ್ಮೀ ಅವರಿಂದ ಮತದಾನ

ಅವರಿಗೆ ಎರಡೂ ಕೈಗಳಿಲ್ಲದ ಕಾರಣ ಅವರು ತಮ್ಮ ಕಾಲು ಬೆರಳಿಗೆ ಶಾಹಿ ಹಾಕಿಸಿಕೊಂಡು ಮತದಾನ ಮಾಡಿದರು. ಬಳಿಕ ಅವರು ಮಾತನಾಡಿ, ಮತದಾನ ಎಲ್ಲರ ಹಕ್ಕು. ಹೀಗಾಗಿ ಪ್ರತಿಯೊಬ್ಬರು ಮತ ಚಲಾವಣೆ ಮಾಡಬೇಕು. ಮತದಾನವೇ ಪ್ರಜಾಪ್ರಭುತ್ವದ ಬೇರು ಎಂದು ಹೇಳಿದರು. ಲಕ್ಷ್ಮೀ ಅವರನ್ನು ಸಾರ್ವತ್ರೀಕ ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಜಿಲ್ಲೆಯ ಮತದಾನ ಜಾಗೃತಿ ರಾಯಭಾರಿಯನ್ನಾಗಿ ಮಾಡಲಾಗಿತ್ತು.

ABOUT THE AUTHOR

...view details