ಕರ್ನಾಟಕ

karnataka

ETV Bharat / state

ಕೈಗಾರಿಕೆ ವಾಣಿಜ್ಯ ವಸತಿ ವಿನ್ಯಾಸಗಳಿಗೆ ಅನಧಿಕೃತ ಅನುಮೋದನೆ: ಸೂಕ್ತ ಕ್ರಮಕ್ಕೆ ಒತ್ತಾಯ - Rural Development and Panchayat Raj Department General Secretary Atek news

ಪ್ರಾಧಿಕಾರದಿಂದ ವಿನ್ಯಾಸ ಅನುಮೋದನೆ ಪಡೆದುಕೊಳ್ಳದೇ ಅನಧಿಕೃತವಾಗಿ ಅಧಿಕಾರಿಗಳು ಕೈಗಾರಿಕಾ ವಾಣಿಜ್ಯ ವಸತಿ ವಿನ್ಯಾಸಗಳಿಗೆ ಅನುಮೋದನೆ ನೀಡಿದ್ದಾರೆ ಎಂದು ಬುಡಾ ಅಧ್ಯಕ್ಷ‌‌ ದಮ್ಮೂರು ಶೇಖರ್ ಆರೋಪಿಸಿದ್ದಾರೆ.

Dammur shekar
Dammur shekar

By

Published : Jul 13, 2020, 2:43 PM IST

ಬಳ್ಳಾರಿ : ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಬರುವ 18 ಗ್ರಾಮಗಳಲ್ಲಿ ಪ್ರಾಧಿಕಾರದಿಂದ ವಿನ್ಯಾಸ ಅನುಮೋದನೆ ಪಡೆದುಕೊಳ್ಳದೇ ಅನಧಿಕೃತವಾಗಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು ಕೈಗಾರಿಕೆ ವಾಣಿಜ್ಯ ವಸತಿ ವಿನ್ಯಾಸಗಳಿಗೆ ಅನುಮೋದನೆ ನೀಡಿದ್ದಾರೆ ಎಂದು ಬುಡಾ ಅಧ್ಯಕ್ಷ‌‌ ದಮ್ಮೂರು ಶೇಖರ್ ಆರೋಪಿಸಿದ್ದಾರೆ.

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಎಲ್.ಕೆ‌. ಅತೀಕ್ ಅವರನ್ನು ಬೆಂಗಳೂರಿನಲ್ಲಿ ‌ಇಂದು ಭೇಟಿಯಾಗಿ ಮನವಿ ಸಲ್ಲಿಸಿದ ದಮ್ಮೂರು ಶೇಖರ್, ಈ ರೀತಿ ಅನುಮೋದನೆ ನೀಡುವುದು ಕಾನೂನಿನಡಿ ಅಕ್ರಮವಾಗಿದ್ದು, ಪಿಡಿಒಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಸ್ಪಂದಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕಾರ್ಯದರ್ಶಿ ಅತೀಕ್ ಈ ಕುರಿತು ಪಂಚಾಯತ್ ರಾಜ್ ಇಲಾಖೆಯ ಆಯುಕ್ತರಿಗೆ ಪರಿಶೀಲ‌ನೆ ನಡೆಸಿ ಕ್ರಮ ಕೈಗೊಳ್ಳಲು ಸೂಚಿಸಿದರು.

ABOUT THE AUTHOR

...view details