ಬಳ್ಳಾರಿ: ಬೇಕರಿ ಮಾಲೀಕನ ಮನೆ ಬೀಗ ಮುರಿದು ಸುಮಾರು 4 ಲಕ್ಷ ನಗದು ಹಾಗೂ 5 ಕೆ.ಜಿ.ಯಷ್ಟು ಬೆಳ್ಳಿ ಕಳವು ಮಾಡಿರುವ ಘಟನೆ ನಡೆದಿದೆ.
ಮನೆ ಬೀಗ ಮುರಿದು 4 ಲಕ್ಷ ನಗದು, 5 ಕೆ.ಜಿ. ಬೆಳ್ಳಿ ಕಳ್ಳತನ - ಬಳ್ಳಾರಿ ಕ್ರೈಮ್ ಲೆಟೆಸ್ಟ್ ನ್ಯೂಸ್
ಬಳ್ಳಾರಿಯ ಸತ್ಯನಾರಾಣಪೇಟೆಯ ನಿವಾಸಿ ಜಿ.ವಿ. ಮಂಜುನಾಥ್ ಎಂಬುವವರ ಮನೆ ಬೀಗ ಮುರಿದು, ಮನೆಯಲ್ಲಿದ್ದ ಸುಮಾರು 4 ಲಕ್ಷ ನಗದು ಹಾಗೂ 5 ಕೆ.ಜಿ. ಮೌಲ್ಯದ ಬೆಳ್ಳಿ ಕಳವು ಮಾಡಿರುವ ಘಟನೆ ನಡೆದಿದೆ.
Unknown person looted house at Bellary
ಇಲ್ಲಿನ ಸತ್ಯನಾರಾಯಣಪೇಟೆ ನಿವಾಸಿ ಜಿ.ವಿ.ಮಂಜುನಾಥ್ ಎಂಬುವವರ ಮನೆ ಬೀಗ ಮುರಿದ ದುಷ್ಕರ್ಮಿಗಳು, ಸುಮಾರು 5 ಕೆ.ಜಿ.ಯಷ್ಟು ಬೆಳ್ಳಿ, 9 ತೊಲೆ ಬಂಗಾರ ಹಾಗೂ 4 ಲಕ್ಷ ನಗದು ಕಳವು ಮಾಡಿದ್ದಾರೆ. ಮಂಜುನಾಥ್ ಅವರು ಬೇಕರಿ ಉದ್ಯಮ ನಡೆಸುತ್ತಿದ್ದು, ಫೆ.15ರಂದು ಕುಟುಂಬ ಸಮೇತ ಊರಿಗೆ ತೆರಳಿದ್ದರು. ಶುಕ್ರವಾರ ಕೆಲಸದವರು ಮನೆ ಸ್ವಚ್ಛ ಮಾಡಲು ಬಂದಾಗ ಕಳತನ ನಡೆದದ್ದು ಬೆಳಕಿಗೆ ಬಂದಿದೆ.
ಈ ಸಂಬಂಧ ಗಾಂಧಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.