ಕರ್ನಾಟಕ

karnataka

ETV Bharat / state

ಹಂಪಿ: ಕ್ರಿಮಿನಾಶಕ ಸೇವಿಸಿ ಇಬ್ಬರು ಸಹೋದರಿಯರು ಆತ್ಮಹತ್ಯೆ - siblings suicide latest news

ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ವಿರೂಪಾಕ್ಷೇಶ್ವರ ಸಾಲುಮಂಟಪದ ರಥ ಬೀದಿಯಲ್ಲಿ ಆಂಧ್ರ ಮೂಲದ ಸೋದರಿಯರಿಬ್ಬರು ಕ್ರಿಮಿನಾಶಕ ಸೇವಿಸಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.

sisters commits suicide
ಸಹೋದರಿಯರಿಬ್ಬರು ಆತ್ಮಹತ್ಯೆ

By

Published : Dec 1, 2020, 11:58 AM IST

ಹೊಸಪೇಟೆ:ಹಂಪಿಯ ವಿರೂಪಾಕ್ಷೇಶ್ವರ ಸಾಲುಮಂಟಪದ ರಥ ಬೀದಿಯಲ್ಲಿ ಆಂಧ್ರ ಪ್ರದೇಶ ಮೂಲದ ಸಹೋದರಿಯರಿಬ್ಬರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಮೀನಾಕ್ಷಮ್ಮ(52), ಕಮಲಮ್ಮ(50) ಆತ್ಮಹತ್ಯೆ ಮಾಡಿಕೊಂಡವರು. ನ.28 ರಂದು ಮನೆ ಬಿಟ್ಟು ಬಂದಿದ್ದಾರೆ. ಸಾಲು ಮಂಟಪದಲ್ಲಿ ಹಲವು ಗಂಟೆಗಳ ಕಾಲ ಮಲಗಿದ್ದಾರೆ. ಇದರಿಂದ ಎಎಎಸ್​​ಐ ಗೈಡ್ ಮಹಿಳೆಯರನ್ನು ಎಬ್ಬಿಸಲು ಹೋಗಿದ್ದಾರೆ. ಆಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಆತ್ಮಹತ್ಯೆಗೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಕುರಿತು ಹಂಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details