ಕರ್ನಾಟಕ

karnataka

ಕೋವಿಡ್-19 ಅಬ್ಬರ: ಬಳ್ಳಾರಿಯಲ್ಲಿ ಟ್ರಾಮಾಕೇರ್ ಸೆಂಟರ್ ಲೋಕಾರ್ಪಣೆಗೆ ಮುಹೂರ್ತ ಫಿಕ್ಸ್

By

Published : Jul 19, 2020, 10:35 AM IST

ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಟ್ರಾಮಾಕೇರ್ ಸೆಂಟರ್​ಗೆ ಶೀಘ್ರದಲ್ಲೇ ಚಾಲನೆ ಸಿಗಲಿದೆ. ಟ್ರಾಮಾ ಕೇಂದ್ರ ಉದ್ಘಾಟನೆ ಬಳಿಕ ಕೋವಿಡ್-19 ಸೋಂಕಿತರಿಗೆ ಮೊದಲನೆಯ ಆದ್ಯತೆ ನೀಡಲಾಗುವುದು ಎಂದು ಜಿಲ್ಲಾ ಸಚಿವ ಆನಂದ ಸಿಂಗ್​ ಹೇಳಿದರು.

bellary
ಆನಂದ್ ಸಿಂಗ್

ಬಳ್ಳಾರಿ:ಗಣಿ ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ಕೋವಿಡ್-19 ಪ್ರಕರಣಗಳ ನಿಯಂತ್ರಣದ ಸಲುವಾಗಿ ಜುಲೈ 21ರಂದು ಟ್ರಾಮಾಕೇರ್ ಸೆಂಟರ್ ಅನ್ನ ಸಾರ್ವಜನಿಕ ಸೇವೆಗಾಗಿ ಲೋಕಾರ್ಪಣೆ ಮಾಡಲಾಗುವುದೆಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ತಿಳಿಸಿದ್ದಾರೆ.

ಟ್ರಾಮಾಕೇರ್ ಸೆಂಟರ್ ಲೋಕಾರ್ಪಣೆ ಕುರಿತು ಮಾತನಾಡಿದ ಸಚಿವ ಆನಂದ್ ಸಿಂಗ್

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜುಲೈ 21 ರಂದು ಬೆಳಗ್ಗೆ 11 ಗಂಟೆಗೆ ಟ್ರಾಮಾಕೇರ್ ಸೆಂಟರ್​ಗೆ ಚಾಲನೆ ನೀಡಲಾಗುವುದು. ಬಹುದಿನಗಳಿಂದ ನೆನೆಗುದಿಗೆ ಬಿದ್ದ ಈ ಟ್ರಾಮಾಕೇರ್ ಸೆಂಟರ್​ನಿಂದ ಕೋವಿಡ್-19 ಸೋಂಕಿತರಿಗೆ ಮೊದಲನೇಯ ಆದ್ಯತೆ ನೀಡಲಾಗುವುದು ಎಂದು ಸಚಿವರು ಹೇಳಿದರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನ ಈ ಟ್ರಾಮಾಕೇರ್ ಸೆಂಟರ್ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಆಹ್ವಾನಿಸಬೇಕಿತ್ತು. ಆದರೆ, ಈ ಕೋವಿಡ್ ಸಂದರ್ಭದಲ್ಲಿ ಅವರನ್ನ ಆಹ್ವಾನಿಸೋದು ಬೇಡ ಎಂದು ಜಿಲ್ಲಾಡಳಿತದೊಂದಿಗೆ ಚರ್ಚಿಸಿ ನಿರ್ಧರಿಸಲಾಗಿದೆ. ಹೀಗಾಗಿ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರನ್ನ ಆಹ್ವಾನಿಸಲಾಗಿದೆ. ವೈದ್ಯಕೀಯ ಲೋಕದಲ್ಲಿ ಅವರು ಪರಿಣಿತರಿದ್ದಾರೆ. ಅವರಿಂದ ಈ ಟ್ರಾಮಾಕೇರ್ ಸೆಂಟರ್ ಲೋಕಾರ್ಪಣೆಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

ABOUT THE AUTHOR

...view details