ಕರ್ನಾಟಕ

karnataka

By

Published : Nov 15, 2019, 6:12 PM IST

ETV Bharat / state

ಗ್ರಾಮೀಣ ಪ್ರತಿಭೆಗಳಿಗೆ ಬೆಳಕಾದ ಜಿಂದಾಲ್​: ಶಕ್ತಿ ಕೇಂದ್ರಗಳ ಮೂಲಕ ತರಬೇತಿ

ಜಿಂದಾಲ್ ಉಕ್ಕು ಕಾರ್ಖಾನೆ ಆವರಣದಲ್ಲಿರುವ ಶಂಕರಗುಡ್ಡ ಹಾಗೂ ವಿದ್ಯಾನಗರ ಶಕ್ತಿ ಕೇಂದ್ರಗಳಲ್ಲಿ ಗ್ರಾಮೀಣ ಭಾಗದ ಎಂಟನೇ ತರಗತಿ, ಎಸ್​ಎಸ್​ಎಲ್​ಸಿ ಹಾಗೂ ದ್ವಿತೀಯ ಪಿಯುಸಿ ಪಾಸಾದವರಿಗೆ ಜಿಂದಾಲ್ ಸಮೂಹ ಸಂಸ್ಥೆಯ ಎರಡು ಶಕ್ತಿ ಕೇಂದ್ರಗಳಲ್ಲಿ ತರಬೇತಿ ನೀಡಲಾಗುತ್ತಿದೆ.

ಶಕ್ತಿ ಕೇಂದ್ರಗಳ ಮೂಲಕ ತರಬೇತಿ

ಬಳ್ಳಾರಿ:ಜಿಂದಾಲ್ ಸಮೂಹ ಸಂಸ್ಥೆಯ ಎರಡು ಶಕ್ತಿ ಕೇಂದ್ರಗಳಲ್ಲಿ ಗ್ರಾಮೀಣ ಪ್ರತಿಭೆಗಳಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ತರಬೇತಿ ನೀಡಲಾಗುತ್ತಿದೆ.

ಜಿಂದಾಲ್ ಉಕ್ಕು ಕಾರ್ಖಾನೆ ಆವರಣದಲ್ಲಿರುವ ಶಂಕರಗುಡ್ಡ ಹಾಗೂ ವಿದ್ಯಾನಗರ ಶಕ್ತಿ ಕೇಂದ್ರಗಳಲ್ಲಿ ಗ್ರಾಮೀಣ ಭಾಗದ ಎಂಟನೇ ತರಗತಿ, ಎಸ್​ಎಸ್​ಎಲ್​ಸಿ ಹಾಗೂ ದ್ವಿತೀಯ ಪಿಯುಸಿ ಪಾಸಾದವರಿಗೆ ಇಲ್ಲಿ ತರಬೇತಿಯನ್ನು ನೀಡಲಾಗುತ್ತಿದೆ. ಹಾಗೆಯೇ ಜಿಂದಾಲ್​ ಉಕ್ಕು ಕಾರ್ಖಾನೆಗೆ ಭೂಮಿ ನೀಡಿರುವವರ ಮಕ್ಕಳಿಗೂ ಇಲ್ಲಿ ತರಬೇತಿ ನೀಡಲಾಗುತ್ತಿದೆ.

ಶಕ್ತಿ ಕೇಂದ್ರಗಳ ಮೂಲಕ ತರಬೇತಿ

2008ರಲ್ಲಿ ಆರಂಭವಾದ ಓಂಪ್ರಕಾಶ ಜಿಂದಾಲ್ ಸೆಂಟರ್​ನಲ್ಲಿ ಒಟ್ಟು 6 ವಿಭಾಗಗಳಿವೆ. ಎನ್​ಟಿಟಿಎಫ್ ಪ್ಲಾಂಟ್ ಆಪರೇಷನ್ ಆ್ಯಂಡ್ ಮೆಂಟೇನೆನ್ಸ್​ ಕೇಂದ್ರದಲ್ಲಿ ಎಲೆಕ್ಟ್ರಿಕ್, ಮೋಟರ್ ವೆಲ್ಡಿಂಗ್, ಮಷಿನ್ ಮೆಂಟೇನೆನ್ಸ್, ಬೇಸಿಕ್ ಫಿಟ್ಟಿಂಗ್ ಆ್ಯಂಡ್ ಮೆಂಟೇನೆನ್ಸ್​ಗಳನ್ನು ಹೇಳಿಕೊಡಲಾಗುತ್ತದೆ. ಅಷ್ಟೇ ಅಲ್ಲದೆ, ಬ್ಯೂಟಿಷಿಯನ್​, ಬಿಎಸ್ಸಿ ನರ್ಸಿಂಗ್, ಪೋಸ್ಟ್ ಡಿಪ್ಲೋಮಾ ಇಂಡಸ್ಟ್ರಿಯಲ್ ಸೇಫ್ಟಿ, ಟೈಲರಿಂಗ್ ಸೇರಿದಂತೆ ಇನ್ನಿತರೆ ಕೋರ್ಸುಗಳನ್ನು ಹೇಳಿಕೊಡಲಾಗ್ತಿದೆ.

ABOUT THE AUTHOR

...view details