ಕರ್ನಾಟಕ

karnataka

ETV Bharat / state

ಕಳವು ಆರೋಪಿ ಬಂಧನ: ₹ 2.40 ಲಕ್ಷ ಮೌಲ್ಯದ ಚಿನ್ನಾಭರಣ ವಶ - ಗಾಂಧಿನಗರ ಪೊಲೀಸ್​ ತಂಡದಿಂದ ಕಳ್ಳನ ಬಂಧನ

ಗಾಂಧಿನಗರ ಠಾಣಾ ವ್ಯಾಪ್ತಿಯಲ್ಲಿ ನಡೆದ ಎರಡು ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯನ್ನು  ಗಾಂಧಿನಗರ ಠಾಣೆಯ ಪೊಲೀಸರು ಬಂಧಿಸಿ ಅಂದಾಜು ₹ 2.40 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ‌‌.

ಕಳವು ಆರೋಪಿ ಬಂಧನ: ₹ 2.40ಲಕ್ಷ ಚಿನ್ನಾಭರಣ ವಶ

By

Published : Nov 9, 2019, 8:57 PM IST

ಬಳ್ಳಾರಿ:ಕಳ್ಳತನ ಪ್ರಕರಣದ ಆರೋಪಿಯನ್ನು ಗಾಂಧಿನಗರ ಠಾಣೆಯ ಪೊಲೀಸರು ಬಂಧಿಸಿ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ‌‌.

ಗಾಂಧಿನಗರ ಠಾಣಾ ವ್ಯಾಪ್ತಿಯಲ್ಲಿ ನಡೆದ ಎರಡು ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಸೋಮಶೇಖರ ಬಂಧಿತ ಆರೋಪಿ. ಇನ್ಸ್​ಪೆಕ್ಟರ್ ಆರ್. ಗಾಯತ್ರಿ ನೇತೃತ್ವದ ಗಾಂಧಿನಗರ ಪೊಲೀಸ್​ ತಂಡ ಬಳ್ಳಾರಿಯ ಕೆಎಚ್​ಬಿ ಕಾಲೊನಿಯಲ್ಲಿ ಕಳ್ಳನನ್ನು ಬಂಧಿಸಿದೆ. ಆರೋಪಿಯಿಂದ ಪೊಲೀಸರು ಅಂದಾಜು ₹ 2.40 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ‌‌.

ABOUT THE AUTHOR

...view details