ಕರ್ನಾಟಕ

karnataka

ETV Bharat / state

ಹೊಸಪೇಟೆ ಚುನಾವಣಾ ಪ್ರಚಾರಕ್ಕೆ ಅನಿಲ್ ಲಾಡ್.. ಕೈ ಕೊಡಲ್ವಂತೆ..!

ಮಾಜಿ ಶಾಸಕರಾಗಿದ್ದ ಅನಿಲ್​ ಲಾಡ್​​, ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿಯ ನಡುವೆ, ನಾನು ಕಾಂಗ್ರೆಸ್​ ಪಕ್ಷದಲ್ಲೇ ಇದ್ದೇನೆ. ಈ ಪಕ್ಷದ ಪರವೇ ಮತ ಪ್ರಚಾರ ಮಾಡುತ್ತೇನೆ. ನನಗೆ ಯಾರ ಭಯವೂ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

By

Published : Dec 2, 2019, 3:52 PM IST

Anil lad
ಅನಿಲ್ ಲಾಡ್ ಸ್ಪಷ್ಟನೆ

ಹೊಸಪೇಟೆ: ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವೆಂಕಟರಾವ್ ಘೋರ್ಪಡೆ ಅವರಿಗೆ ನನ್ನ ಕಡೆಯಿಂದ ಸಂಪೂರ್ಣ ಬೆಂಬಲ ಸಿಗುತ್ತದೆ. ನಾನು ಸ್ವತಂತ್ರವಾಗಿ ಮತ ಪ್ರಚಾರವನ್ನು ಮಾಡುತ್ತೇನೆ. ನನಗೆ ಯಾರ ಭಯವು ಇಲ್ಲ ಎಂದು ಮಾಜಿ ಶಾಸಕ ಅನಿಲ್ ಲಾಡ್ ಹೇಳಿದ್ದಾರೆ.

ಹೊಸಪೇಟೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ವೆಂಕಟರಾವ್ ಘೋರ್ಪಡೆ ಅವರಿಗೆ ನಾನು ಬೆಂಬಲ ಸೂಚಿಸುತ್ತೇನೆ. ಅವರು ಸರಳ ವ್ಯಕ್ತಿಯಾಗಿದ್ದಾರೆ. ನನಗೆ ಯಾರ ಭಯವು ಇಲ್ಲ. ನಾನು ಮಾತನಾಡುವುದನ್ನು ಪಕ್ಷದ ಹಿರಿಯ ಮುಖಂಡರು ನೋಡುತ್ತಿರುತ್ತಾರೆ ಅವರಿಗೆ ಯಾವುದಾದರು ಖಾತೆಯನ್ನು ನೀಡಬೇಕು ಎಂಬುದು ನನ್ನ ಆಶಯ ಎಂದರು.

ಅನಿಲ್ ಲಾಡ್ ಸ್ಪಷ್ಟನೆ

ಹೈದರಾಬಾದ್ ಕರ್ನಾಟಕಕ್ಕೋಸ್ಕರ ನಾನು ಎಂತಹ ಹೋರಾಟವನ್ನು ಬೇಕಾದರೂ ಮಾಡುತ್ತೇನೆ. ಜಿಂದಾಲ್ ಕಾರ್ಖಾನೆ ವಿಷಯದಲ್ಲಿ ಕಾಂಗ್ರೆಸ್ ಪಕ್ಷದವರ ವಿರುದ್ಧ ಮಾತನಾಡುವುದಕ್ಕೆ ತಾಕತ್ತು ಇದ್ದರೆ ಅದು ಅನಿಲ್ ಲಾಡ್ ಗೆ ಮಾತ್ರ.

ನನಗೆ ಆರೋಗ್ಯ ಸಚಿವ ರಾಮುಲು ಅವರು ಬಿಜೆಪಿಗೆ ಸೇರಲು ಆಹ್ವಾನಿಸಿದ್ದು ನಿಜ. ಆದರೆ ನಾನು ಹೋಗಲಿಲ್ಲ. ರಾಮುಲು ಅವರ ಬಗ್ಗೆ ನನಗೆ ದ್ವೇಷವಿಲ್ಲ ಎಂದು ಲಾಡ್​ ಹೇಳಿದರು.

ABOUT THE AUTHOR

...view details