ಕರ್ನಾಟಕ

karnataka

ನನ್ನನ್ನು ಮಂತ್ರಿಸ್ಥಾನದಿಂದ ಕೈ ಬಿಡಲ್ಲ; ಸಚಿವ ಪ್ರಭು ಚವ್ಹಾಣ್ ವಿಶ್ವಾಸ

By

Published : Jan 13, 2021, 12:34 PM IST

ತಮ್ಮನ್ನು ಮಂತ್ರಿಸ್ಥಾನದಿಂದ ಕೈ ಬಿಡುತ್ತಾರಾ ಎಂಬುದರ ಕುರಿತು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಪ್ರತಿಕ್ರಿಯಿಸಿದ್ದು, ಈ ಕುರಿತಂತೆ ಸಿಎಂ ಯಡಿಯೂರಪ್ಪನವರಾಗಲಿ, ಹೈಕಮಾಂಡ್​ ಆಗಲಿ ಮಂತ್ರಿಸ್ಥಾನದಿಂದ ಕೈ ಬಿಡುವುದಾಗಿ ತಿಳಿಸಿಲ್ಲ. ಕೇವಲ ಮಾಧ್ಯಮಗಳಲ್ಲಿ ವರದಿಗಳು ಕೇಳಿ ಬರುತ್ತಿವೆ ಎಂದು ಸಚಿವರು ಹೇಳಿದ್ದಾರೆ.

ಸಚಿವ ಪ್ರಭು ಚೌವ್ಹಾಣ್
Prabhu Chawhan

ಹೊಸಪೇಟೆ:30 ವರ್ಷದಿಂದ ಪಕ್ಷದ ಕಾರ್ಯಕರ್ತನಾಗಿ ಸೇವೆ ಸಲ್ಲಿಸಿದ್ದೇ‌ನೆ. ಇದಾದ ಬಳಿಕ ಮಂತ್ರಿ ಸ್ಥಾನ ದೊರೆತಿದೆ. ಮಂತ್ರಿ ಮಾಡಲು ಯಾರಿಗೂ ಬೇಡಿಕೆ ಇಟ್ಟಿಲ್ಲ ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಹೇಳಿದರು.

ಪಶುಸಂಗೋಪನಾ ಸಚಿವ ಪ್ರಭು ಚೌವ್ಹಾಣ್

ನಗರದ ಖಾಸಗಿ ಹೋಟೆಲ್​​​ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವನಾದ ಬಳಿಕ ಗೋಹತ್ಯೆ ನಿಷೇಧ ಸೇರಿದಂತೆ ಅನೇಕ‌ ಕಾರ್ಯಗಳನ್ನು‌ ಮಾಡಲಾಗಿದೆ. ಮಂತ್ರಿಸ್ಥಾನದಿಂದ ಕೈ ಬಿಡುವ ಕುರಿತಂತೆ ಹೈಕಮಾಂಡ್​ ಆಗಲಿ, ಮುಖ್ಯಮಂತ್ರಿಗಳಾಗಲಿ ಹಾಗೂ ರಾಜ್ಯಾಧ್ಯಕ್ಷರು ತಿಳಿಸಿಲ್ಲ. ಆದರೆ ಮಾಧ್ಯಮಗಳಲ್ಲಿ ಸಚಿವ ಸ್ಥಾನದಿಂದ ಬಿಡುವ ಕುರಿತು ವರದಿಗಳು ಕೇಳಿ ಬರುತ್ತಿವೆ. ಸಚಿವ ಸ್ಥಾನದಿಂದ ಬಿಡುವುದಿಲ್ಲ ಎಂಬ ನಂಬಿಕೆ ಇದೆ ಎಂದರು.

ಓದಿ: ಸಚಿವ ನಾಗೇಶ್​ಗೆ ಕೋಕ್.. ಬಿಎಸ್​ವೈ ಸಂಪುಟ ಸೇರಿದ ಸಪ್ತ ಸಚಿವರು..

ರಾಜ್ಯದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿಲ್ಲ. ಈಗಾಗಲೇ ಮುಂಜಾಗ್ರತೆ ವಹಿಸುವಂತೆ ಎಲ್ಲಾ ಅಧಿಕಾರಿಗಳಿಗೆ ಆದೇಶಿಸಲಾಗಿದೆ. ಬೇರೆ ರಾಜ್ಯಗಳಿಂದ ಕೋಳಿ ಆಮದು, ರಫ್ತು ನಿಲ್ಲಿಸಲಾಗಿದೆ ಎಂದರು.

ABOUT THE AUTHOR

...view details