ದಾವಣಗೆರೆ/ಬಳ್ಳಾರಿ:ಸೂರ್ಯಗ್ರಹಣ ಜನರಲ್ಲಿ ಭೀತಿ ಹುಟ್ಟಿಸಿದ್ದು, ದಾವಣಗೆರೆ ಹಾಗೂ ಬಳ್ಳಾರಿಯಲ್ಲಿ ಜನರು ದೇವರ ಮೊರೆ ಹೋಗಿದ್ದಾರೆ. ವಿವಿಧೆಡೆ ವಿವಿಧ ರೀತಿಯಲ್ಲಿ ಪೂಜೆ ಮಾಡುತ್ತಿದ್ದಾರೆ. ದಾವಣಗೆರೆಯ ಕೆ.ಬಿ ಬಡಾವಣೆಯ ಶ್ರೀ ರಾಘವೇಂದ್ರ ರಾಯರ ಮಠದಲ್ಲಿ 500 ಕ್ಕೂ ಅಧಿಕ ಜನರು ಪೂಜೆ ಸಲ್ಲಿಸಿದರು.
ಹರಪನಹಳ್ಳಿಯಲ್ಲಿ ಹಬ್ಬಿದ ವದಂತಿಗೆ ಎಕ್ಕದ ಗಿಡಕ್ಕೆ ಪೂಜೆ ಸಲ್ಲಿಸಲಾಗಿದ್ದಾರೆ. ಹರಿಹರದ ಐತಿಹಾಸಿಕ ಹರಿಹರೇಶ್ವರ ದೇವಸ್ಥಾನದಲ್ಲಿ ನಿರಂತರ ಅಭಿಷೇಕ ಮಾಡಲಾಗುತ್ತಿದೆ. ಗ್ರಹಣ ಸ್ಪರ್ಶ ಕಾಲದಿಂದ ಮೋಕ್ಷ ಕಾಲದವರೆಗೆ ಜಲಾಭಿಷೇಕ ನಡೆಸಲಾಗುತ್ತಿದೆ.