ಕರ್ನಾಟಕ

karnataka

ETV Bharat / state

'ಪಕೋಡ ಮಾರಿ' ಬಿಜೆಪಿ ಕರೆ ಯುವಶಕ್ತಿಗೆ ಅವಮಾನ: ಪಿ.ಟಿ ಪರಮೇಶ್ವರ ನಾಯ್ಕ್ - undefined

ಯುವಕರಿಗೆ ಪಕೋಡ ಮಾಡಿ ಎಂದು ಕರೆ ನೀಡಿದ ಬಿಜೆಪಿ ಸರ್ಕಾರ ಅವರಿಗೆ ಅವಮಾನ ಮಾಡಿದೆ ಎಂದು ಹೂವಿನ ಹಡಗಲಿ ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ್ ಟೀಕಿಸಿದರು.

ಪಿ.ಟಿ ಪರಮೇಶ್ವರ ನಾಯ್ಕ್

By

Published : Apr 19, 2019, 10:19 PM IST

ಬಳ್ಳಾರಿ: ಉದ್ಯೋಗ ಕೇಳಲು ಬಂದರೆ, ಬಿಜೆಪಿ ಸರ್ಕಾರ ಪಕೋಡ ಮಾಡಿ ಎಂದು ಹೇಳುವ ಮೂಲಕ ಯುವಶಕ್ತಿಗೆ ಅವಮಾನ ಮಾಡಿದೆ ಎಂದು ಹೂವಿನ ಹಡಗಲಿ ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ್ ಟೀಕೆ ಮಾಡಿದರು.

ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೇಕೋಟೆಯಲ್ಲಿ ಬಳ್ಳಾರಿ ಲೋಕಸಭಾ ಚುನಾವಣಾ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್. ಉಗ್ರಪ್ಪ ಪರ ಪ್ರಚಾರ ಮಾಡಲು ಆಗಮಿಸಿದ ಹೂವಿನ ಹಡಗಲಿ ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ್ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು. ಕಾಂಗ್ರೆಸ್ ಪಕ್ಷದವರು ಲೂಟಿ ಹೊಡೆದ ಸಾವಿರಾರು ಕೋಟಿ ಕಪ್ಪು ಹಣವನ್ನು ಸ್ವಿಸ್​​ಬ್ಯಾಂಕ್​ನಲ್ಲಿ ಇಟ್ಟಿದ್ದಾರೆ. ಅದನ್ನು ತಂದು ಎಲ್ಲರ ಖಾತೆಗೆ ತಲಾ 15 ಲಕ್ಷ ರೂ. ಜಮೆ ಮಾಡುವುದಾಗಿ ಮೋದಿ ಭರವಸೆ ನೀಡಿದ್ದರು. ಆದ್ರೀಗ ಆ ಭರವಸೆ ಎಲ್ಲಿ ಹೋಯ್ತು ಎಂದು ಪ್ರಶ್ನಿಸಿದ್ರು.

ಪಿ.ಟಿ ಪರಮೇಶ್ವರ ನಾಯ್ಕ್

ಸಿದ್ದರಾಮಯ್ಯ ಸಿಎಂ ಆಗಿದ್ದಾಗ 4 ಕೋಟಿ ಬಡವರಿಗೆ ಹೊಟ್ಟೆ ತುಂಬಾ ಎರಡು ಹೊತ್ತು ಊಟ ನೀಡಿದ್ದಾರೆ. ಮನಸ್ವಿನಿ, ಮಾತೃ ಪೂರ್ಣ, ಕೃಷಿ ಭಾಗ್ಯ ಹೀಗೆ ಹತ್ತಾರು ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಬಡವರ, ಮಹಿಳೆಯರ ಜನ ಸಾಮಾನ್ಯರ ಪರವಾಗಿ ಕಾಂಗ್ರೆಸ್ ಕೆಲಸ ಮಾಡುತ್ತದೆ. ಆದ್ರೆ ಬಿಜೆಪಿ ಏನು ಮಾಡಿದೆ ಎಂದರು.

ಮೋದಿ 2 ಕೋಟಿ ಉದ್ಯೋಗ ಸೃಷ್ಟಿ ಮಾಡಿದರೇ..?

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ್ರೆ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೀವಿ ಎಂದು ಮೋದಿ ಹೇಳಿದ್ದರು. ಆದರೆ ಐದು ವರ್ಷಕ್ಕೆ 10 ಕೋಟಿ ಉದ್ಯೋಗವನ್ನೂ ಸೃಷ್ಟಿ ಮಾಡಿಲ್ಲ. ಇನ್ನು ಯುವಕರು ಉದ್ಯೋಗ ಕೇಳಲು ಹೋದರೆ ಪಕೋಡ ಮಾಡಿ ಎಂದು ಹೇಳಿ ಅವಮಾನ ಮಾಡಿದ್ದಾರೆ ಎಂದರು.

For All Latest Updates

TAGGED:

ABOUT THE AUTHOR

...view details