ಬಳ್ಳಾರಿ: ಜಿಲ್ಲೆಯ ಹೊಸಪೇಟೆ ತಾಲೂಕಿನ ಧರ್ಮಸಾಗರ ಗ್ರಾಮದ ಬಾಲಕಿಯೋರ್ವಳನ್ನ ನಿಗೂಢವಾಗಿ ಅಪಹರಿಸಲಾಗಿದೆ ಎಂದು ದೂರು ದಾಖಲಿಸಲಾಗಿದೆ.
ಹೊಲಕ್ಕೆ ಹತ್ತಿ ಬಿಡಿಸಲು ಹೋಗಿದ್ದ ಬಾಲಕಿ ನಾಪತ್ತೆ: ದೂರು ದಾಖಲು - ಬಳ್ಳಾರಿ ಬಾಲಕಿ ಅಪಹರಣ ದೂರು ದಾಖಲು ಸುದ್ದಿ
ಆಗಸ್ಟ್ 8ರಂದು ಸಂಬಂಧಿಕರ ಹೊಲಕ್ಕೆ ಹತ್ತಿ ಬಿಡಿಸಲು ಹೋದ ಬಾಲಕಿ ಅಪಹರಣಕ್ಕೆ ಒಳಗಾಗಿದ್ದಾಳೆಂದು ಕುಟುಂಬಸ್ಥರು ದೂರು ದಾಖಲಿಸಿದ್ದಾರೆ.
![ಹೊಲಕ್ಕೆ ಹತ್ತಿ ಬಿಡಿಸಲು ಹೋಗಿದ್ದ ಬಾಲಕಿ ನಾಪತ್ತೆ: ದೂರು ದಾಖಲು ಬಾಲಕಿ ಅಪಹರಣ](https://etvbharatimages.akamaized.net/etvbharat/prod-images/768-512-8472128-237-8472128-1597806695902.jpg)
ಧರ್ಮಸಾಗರ ಗ್ರಾಮದ ರೇಣುಕಾ (17) ಅಪಹರಣಕ್ಕೆ ಒಳಗಾಗದ ಬಾಲಕಿ ಎಂದು ಗುರುತಿಸಲಾಗಿದೆ. ಆಗಸ್ಟ್ 8ರಂದು ಸಂಬಂಧಿಕರ ಹೊಲಕ್ಕೆ ಹತ್ತಿ ಬಿಡಿಸಲು ಹೋದ ಸಮಯದಲ್ಲಿ ಅಪಹರಣಕ್ಕೆ ಒಳಗಾಗಿದ್ದಾಳೆಂದು ಹೇಳಲಾಗುತ್ತಿದೆ.
ಈ ಬಾಲಕಿ ಬಗ್ಗೆ ಮಾಹಿತಿ ದೊರೆತಲ್ಲಿ ಕೂಡಲೇ ಗಾದಿಗನೂರು ಪೊಲೀಸ್ ಠಾಣೆಯ ಸ್ಥಿರ ದೂರವಾಣಿ ಸಂಖ್ಯೆ 08394-248033 ಅಥವಾ ಬಳ್ಳಾರಿ ಎಸ್ಪಿ ಕಚೇರಿಯ ಸ್ಥಿರ ದೂರವಾಣಿ ಸಂಖ್ಯೆ 08392-258400, ಕೂಡ್ಲಿಗಿ ಡಿಎಸ್ಪಿ ಸ್ಥಿರ ದೂರವಾಣಿ ಸಂಖ್ಯೆ: 08391-220326 ಹಾಗೂ ಸಂಡೂರ ಸಿಪಿಐ ಸ್ಥಿರ ದೂರವಾಣಿ ಸಂಖ್ಯೆ 08395-260100ಕ್ಕೆ ಸಂಪರ್ಕಿಸಬೇಕೆಂದು ಗಾದಿಗನೂರು ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಪ್ರಕಟಣೆಯಲ್ಲಿ ಕೋರಿದ್ದಾರೆ.