ಹೊಸಪೇಟೆ (ವಿಜಯನಗರ):ವಿಶ್ವವಿಖ್ಯಾತ ಹಂಪಿಯ ವಿರೂಪಾಕ್ಷೇಶ್ವರ ದೇವರ ವಿಗ್ರಹಕ್ಕೆ ಇಂದು ಅಭಿಷೇಕ ಸೇವಾ ಕೈಂಕರ್ಯವನ್ನು ನೆರವೇರಿಸಿದರು. ಭಕ್ತರು ತುಂಗಭದ್ರಾ ನದಿಯಲ್ಲಿ ಪುಣ್ಯ ಸ್ನಾನವನ್ನು ಮಾಡಿ, ಬಳಿಕ ದೇವರ ವಿಗ್ರಹಕ್ಕೆ ಅಭಿಷೇಕ ಮಾಡಿದರು.
ಹಂಪಿ ವಿರೂಪಾಕ್ಷೇಶ್ವರನಿಗೆ ಅಭಿಷೇಕ ಸೇವಾ ಕಾರ್ಯ ಪ್ರಾರಂಭ - ದೇವಾಲಯಗಳಲ್ಲಿ ಅಭಿಷೇಕ ಆರಂಭ ಸುದ್ದಿ
ವಿಶ್ವವಿಖ್ಯಾತ ಹಂಪಿಯ ವಿರೂಪಾಕ್ಷೇಶ್ವರ ದೇವರ ವಿಗ್ರಹಕ್ಕೆ ಸೋಮವಾರ ಅಭಿಷೇಕ ಸೇವಾ ಕೈಂಕರ್ಯವನ್ನು ನೆರವೇರಿಸಲಾಯ್ತು.

ಹಂಪಿ ವಿರೂಪಾಕ್ಷೇಶ್ವರನಿಗೆ ಅಭಿಷೇಕ ಸೇವಾ ಕಾರ್ಯ ಪ್ರಾರಂಭ
ಬಳಿಕ ವಿಶೇಷ ಪೂಜೆ ಮಾಡಿ, ನಾನಾ ಹೂಗಳಿಂದ ದೇವರನ್ನು ಅಲಂಕರಿಸಲಾಯ್ತು. ಕೊರೊನಾ ಹಿನ್ನೆಲೆಯಲ್ಲಿ ಕಳೆದ ಎರಡೂವರೆ ತಿಂಗಳಿಂದ ಅಭಿಷೇಕ ಮಾಡುವುದನ್ನು ನಿಲ್ಲಿಸಲಾಗಿತ್ತು. ಆದರೆ ಇಂದಿನಿಂದ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ದೇವಸ್ಥಾನಗಳಿಗೆ ಭಕ್ತರಿಗೆ ಅಭಿಷೇಕ ಸೇವಾ ಅವಕಾಶವನ್ನು ಕಲ್ಪಿಸಲಾಗಿದೆ.
ಇದನ್ನೂ ಓದಿ:ಧರ್ಮ ಸಾಮರಸ್ಯದಲ್ಲಿ ಅರಳಿತು ದೇವಾಲಯ: ಕರಾವಳಿಯಲ್ಲಿ 'ಸಿದ್ಧಿ'ಸಿತು ಕೋಮು ಸೌಹಾರ್ದತೆ