ಕರ್ನಾಟಕ

karnataka

By

Published : Jul 6, 2020, 2:56 PM IST

ETV Bharat / state

ಬಳ್ಳಾರಿಯಲ್ಲಿ ಆರು ಮಂದಿ ಹೋಮ್​​ ಕ್ವಾರಂಟೈನ್: ಡಿಸಿ ಎಸ್.ಎಸ್.‌ನಕುಲ್

ಜಿಲ್ಲೆಯಲ್ಲಿ ಈ ದಿನ ಆರು ಮಂದಿ ಎ ಕೆಟಗರಿ‌ ರೋಗದ ಗುಣಲಕ್ಷಣವುಳ್ಳವರು ಪತ್ತೆಯಾಗಿದ್ದು, ಅವರಿಗೆ ಕೋವಿಡ್ - 19 ರೋಗದ ಗುಣಲಕ್ಷಣ ಇರೋದಿಲ್ಲ. ಹೀಗಾಗಿ, ಅವರನ್ನ ಹೋಮ್​ ಕ್ವಾರಂಟೈನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.‌ನಕುಲ್ ತಿಳಿಸಿದ್ದಾರೆ.

S S Nakul
ಜಿಲ್ಲಾಧಿಕಾರಿ ಎಸ್.ಎಸ್.‌ನಕುಲ್

ಬಳ್ಳಾರಿ: ಜಿಲ್ಲೆಯಲ್ಲಿ ಇಂದಿನಿಂದ ಹೋಮ್​​ ಕ್ವಾರಂಟೈನ್ ವ್ಯವಸ್ಥೆ ಶುರುವಾಗಿದ್ದು, ಈ ದಿನ ಆರು ಮಂದಿಯನ್ನ ಕ್ವಾರಂಟೈನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.‌ನಕುಲ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಎಸ್.ಎಸ್.‌ನಕುಲ್

ನಗರದ ಡಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಸರ್ಕಾರದ ಆದೇಶದ ಅನ್ವಯ ಈ ಕ್ರಮ ಕೈಗೊಳ್ಳಲಾಗಿದೆ. ಆರ್ ಆರ್ ಟೀಂ ಮೊದಲು ಎ ಕೆಟಗರಿ ರೋಗದ ಗುಣಲಕ್ಷಣವುಳ್ಳವರ ಮನೆಗೆ ಭೇಟಿ ನೀಡಿ, ಶೌಚಾಲಯ ಸಮೇತ ಪ್ರತ್ಯೇಕ ಕೊಠಡಿ ಹೊಂದಿದೆಯೋ ಇಲ್ಲವೋ ಎಂಬುದನ್ನ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.

ಆರು ಮಂದಿ ಹೋಮ್​ ಕ್ವಾರಂಟೈನ್: ಜಿಲ್ಲೆಯಲ್ಲಿ ಈ ದಿನ ಆರು ಮಂದಿ ಎ ಕೆಟಗರಿ‌ ರೋಗದ ಗುಣಲಕ್ಷಣವುಳ್ಳವರು ಪತ್ತೆಯಾಗಿದ್ದು, ಅವರಿಗೆ ಕೋವಿಡ್ - 19 ರೋಗದ ಗುಣಲಕ್ಷಣ ಇರೋದಿಲ್ಲ. ಹೀಗಾಗಿ, ಅವರನ್ನ ಹೋಮ್​ ಕ್ವಾರಂಟೈನ್ ಮಾಡಲಾಗಿದೆ. ಅವರಿಗೆ ಈ ರೋಗದ ಗುಣಲಕ್ಷಣಗಳಿದ್ದರೆ ಕೂಡಲೇ ಕೋವಿಡ್ ಆಸ್ಪತ್ರೆಗೆ ಶಿಫ್ಟ್ ಮಾಡಲು ಅಗತ್ಯ ವಾಹನ ಸೌಲಭ್ಯವನ್ನೂ ಕೂಡ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ABOUT THE AUTHOR

...view details