ಕರ್ನಾಟಕ

karnataka

By

Published : Jun 8, 2019, 9:40 PM IST

ETV Bharat / state

ಜಿಂದಾಲ್ ಉಕ್ಕು ಕಾರ್ಖಾನೆಗೆ ಭೂಮಿ ಕೊಡಲೇಬೇಕು: ಎಫ್​ಕೆಸಿಸಿಐ ಅಧ್ಯಕ್ಷ ಆಗ್ರಹ

ಜಿಂದಾಲ್ ಸಂಸ್ಥೆಗೆ ಆ ಭೂಮಿಯನ್ನು ಪರಭಾರೆ ಮಾಡೋದಕ್ಕೆ ಹಿಂದೇಟು ಹಾಕಿದ್ರೆ, ಭವಿಷ್ಯದಲ್ಲಿ ಕರ್ನಾಟಕ ರಾಜ್ಯಕ್ಕೆ ಕೈಗಾರಿಕಾ ಕಂಪನಿಗಳು ಬರೋದಿಲ್ಲ. ಈ ಸೂಕ್ಷ್ಮ ಅಂಶವನ್ನು ಗಮನದಲ್ಲಿಟ್ಟುಕೊಂಡೇ ರಾಜ್ಯ ಸರ್ಕಾರ ಉದ್ದಿಮೆದಾರರೊಂದಿಗೆ ವ್ಯವಹರಿಸಬೇಕಾಗುತ್ತದೆ ಎಂದು ಸೂಚಿಸಿದರು.

ಜಿಂದಾಲ್ ಉಕ್ಕು ಕಾರ್ಖಾನೆಗೆ ಭೂಮಿ ಪರಭಾರೆ ಮಾಡಲೇಬೇಕು

ಬಳ್ಳಾರಿ: ಜಿಂದಾಲ್ ಉಕ್ಕು ಕಾರ್ಖಾನೆಗೆ ಅಂದಾಜು 3,667 ಎಕರೆ ಭೂಮಿಯನ್ನು ಪರಭಾರೆ ಮಾಡಲೇಬೇಕು. ಯಾರ ವಿರೋಧಕ್ಕೂ ಮಣಿಯಬಾರದೆಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ರಾಜ್ಯ ಘಟಕದ ಅಧ್ಯಕ್ಷ ಸುಧಾಕರ ಎಸ್.ಶೆಟ್ಟಿ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲಿನ ಜಿಂದಾಲ್ ವಿದ್ಯಾನಗರದಲ್ಲಿಂದು ನಡೆದ ರಾಜ್ಯಮಟ್ಟದ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸಮಾವೇಶದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಗುತ್ತಿಗೆ ಮತ್ತು ಮಾರಾಟ ಕರಾರಿನ ಅನ್ವಯ ರಾಜ್ಯ ಸರ್ಕಾರವು 3,667 ಎಕರೆ ಭೂಮಿಯನ್ನು ಮಂಜೂರಾತಿ ಮಾಡಿದೆ. ಲೀಸ್ ಕಂ ಸೇಲ್ ಡೀಡ್​ನಡಿ ಮಾಡಲಾದ ಈ ಭೂಮಿಯನ್ನು ಜಿಂದಾಲ್ ಸಮೂಹ ಸಂಸ್ಥೆ ಹೆಸರಿನಡಿ ಪರಭಾರೆ ಮಾಡಲೇಬೇಕು. ಇಲ್ಲವಾದ್ರೆ ರಾಜ್ಯದಲ್ಲಿ ಕೈಗಾರಿಕಾ ಉದ್ದಿಮೆಗಳು ಭಯಪಡುತ್ತಾರೆ. ಕೇವಲ ಬೆಂಗಳೂರು ಕೇಂದ್ರಿತವಾಗಿ ಕೈಗಾರಿಕಾ ಸಂಸ್ಥೆಗಳ ಸ್ಥಾಪನೆಗೆ ಮುಂದಾಗುವುದರಿಂದ ಬಳ್ಳಾರಿ ಸೇರಿದಂತೆ ಉಳಿದ ಜಿಲ್ಲೆಗಳ ಜನರು ಬೆಂಗಳೂರಿನತ್ತ ಮುಖ ಮಾಡಬೇಕಾಗುತ್ತೆ ಎಂದರು.

ಜಿಂದಾಲ್ ಉಕ್ಕು ಕಾರ್ಖಾನೆಗೆ ಭೂಮಿ ಪರಭಾರೆ ಮಾಡಲೇಬೇಕು

ಜಿಂದಾಲ್ ಸಂಸ್ಥೆಗೆ ಆ ಭೂಮಿಯನ್ನು ಪರಭಾರೆ ಮಾಡೋದಕ್ಕೆ ಹಿಂದೇಟು ಹಾಕಿದ್ರೆ, ಭವಿಷ್ಯದಲ್ಲಿ ಕರ್ನಾಟಕ ರಾಜ್ಯಕ್ಕೆ ಕೈಗಾರಿಕಾ ಕಂಪನಿಗಳು ಬರೋದಿಲ್ಲ. ಈ ಸೂಕ್ಷ್ಮ ಅಂಶವನ್ನು ಗಮನದಲ್ಲಿಟ್ಟುಕೊಂಡೇ ರಾಜ್ಯ ಸರ್ಕಾರ ಉದ್ದಿಮೆದಾರರೊಂದಿಗೆ ವ್ಯವಹರಿಸಬೇಕಾಗುತ್ತದೆ ಎಂದು ಸೂಚಿಸಿದರು.

ಕೇವಲ ಚುನಾವಣೆ ಬಂದಾಗ ಮಾತ್ರ ರಾಜಕಾರಣಿಗಳು ಬಳ್ಳಾರಿಗೆ ಬರುತ್ತಾರೆ. ಗೆದ್ದಾದ ಮೇಲೆ ಬೆಂಗಳೂರಿಗೆ ಶಿಫ್ಟ್ ಆಗಿಬಿಡುತ್ತಾರೆ. ಅವರು ಗೆದ್ದಿರೋದು ಬೆಂಗಳೂರಿನಲ್ಲಿ ಮನೆ, ಮಠ ಸ್ಥಾಪನೆ ಮಾಡೋಕಲ್ಲ. ಇಲ್ಲಿದ್ದೇ, ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕು. ಅದುಬಿಟ್ಟು ಬೆಂಗಳೂರಿಗೆ ಶಿಫ್ಟ್ ಆಗುತ್ತಿರೋದು ದೊಡ್ಡ ದುರಂತವೇ ಸರಿ ಎಂದು ರಾಜಕಾರಣಿಗಳ ವಿರುದ್ಧ ಹರಿಹಾಯ್ದರು.

For All Latest Updates

TAGGED:

ABOUT THE AUTHOR

...view details