ಕರ್ನಾಟಕ

karnataka

ETV Bharat / state

ಸಿರಗುಪ್ಪದಲ್ಲಿ ಸಂತ ಸೇವಾಲಾಲ್ 283ನೇ ಜಯಂತ್ಯೋತ್ಸವ - Saint Sevalal 283rd Jayanthi

ಸಿರಗುಪ್ಪದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಸೋಮವಾರ ಶ್ರೀ ಸಂತ ಸೇವಾಲಾಲರ 283ನೇ ಜಯಂತ್ಯೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಸೇವಾಲಾಲ್ ಅವರ ಆದರ್ಶ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಜೀವನ ಸಾಗಿಸಿ ಎಂದು ಸಿರಗುಪ್ಪ ತಹಶೀಲ್ದಾರ್ ಸತೀಶ್ ಬಿ. ಕೂಡಲಗಿ ಹೇಳಿದರು.

ಸಂತ ಸೇವಾಲಾಲ್ 283ನೇ ಜಯಂತ್ಯೋತ್ಸವ
ಸಂತ ಸೇವಾಲಾಲ್ 283ನೇ ಜಯಂತ್ಯೋತ್ಸವ

By

Published : Feb 15, 2021, 7:54 PM IST

ಬಳ್ಳಾರಿ/ಸಿರುಗುಪ್ಪ: ಜನರಲ್ಲಿನ ಅಜ್ಞಾನ, ಅಂಧಕಾರ, ಅಸಮಾನತೆ, ಜಾತಿ ಪದ್ಧತಿ ಮತ್ತು ಧರ್ಮಾಂಧತೆಗಳನ್ನು ತೊಡೆದುಹಾಕಲು ಹಲವು ಜನ ಸಾಂಸ್ಕೃತಿಕ ನಾಯಕರು, ಮೇಧಾವಿಗಳು ಹೋರಾಡಿದ್ದಾರೆ. ಅಂಥವರಲ್ಲಿ ಸಂತ ಸೇವಾಲಾಲ್ ಪ್ರಮುಖರು ಎಂದು ಸಿರಗುಪ್ಪ ತಹಶೀಲ್ದಾರ್ ಸತೀಶ್ ಬಿ. ಕೂಡಲಗಿ ಹೇಳಿದರು.

ಸಂತ ಸೇವಾಲಾಲ್ 283ನೇ ಜಯಂತ್ಯೋತ್ಸವ

ಸಿರಗುಪ್ಪದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶ್ರೀ ಸಂತ ಸೇವಾಲಾಲರ 283ನೇ ಜಯಂತ್ಯೋತ್ಸವ ಸಮಾರಂಭದಲ್ಲಿ ಸೇವಾಲಾಲರ ಭಾವಚಿತ್ರಕ್ಕೆ ಮಾಲಾರ್ಪಣೆ ಸಲ್ಲಿಸಿ ಅವರು ಮಾತನಾಡಿದರು. ಸೇವಾಲಾಲ್ ಅವರ ಆದರ್ಶ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಜೀವನ ಸಾಗಿಸಿ ಎಂದರು.

ಓದಿ: ’ಹೆಣ್ಮಕ್ಕಳಿಗೆ ಸಮಾನ ಅವಕಾಶ ಕಲ್ಪಿಸುವಲ್ಲಿ ಅಂಬೇಡ್ಕರ್ ಪಾತ್ರ ಮುಖ್ಯವಾದದ್ದು’: ಬಿ. ವಿಜಯ ಕುಮಾರ್

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಶಾಸೂಮೊದೀನ್ ಮಾತನಾಡಿ, ಸೇವಾಲಾಲ್ ಮತ್ತು ಜಗನ್ಮಾತೆ ಮರಿಯಮ್ಮಳ ಮಂದಿರಗಳ ಅಭಿವೃದ್ಧಿಗೆ 68 ಲಕ್ಷ ರೂ. ಸರ್ಕಾರ ಅನುದಾನ ಮಂಜೂರು ಮಾಡಿದ್ದು, ಶೀಘ್ರದಲ್ಲಿಯೇ ಇದು ಕಾರ್ಯರೂಪಕ್ಕೆ ಬರಲಿದೆ ಎಂದರು.

ABOUT THE AUTHOR

...view details