ಬಳ್ಳಾರಿ:ಗಣಿನಾಡು ಬಳ್ಳಾರಿಯ ಲೋಕಸಭಾ ಸದಸ್ಯರಾದ ವೈ.ದೇವೇಂದ್ರಪ್ಪ ಕೇಂದ್ರ ಕಚೇರಿಯ ಮುಂಭಾಗದಲ್ಲಿಯೇ ಮಳೆ ನೀರು ನಿಂತು ಕೆಸರು ಗದ್ದೆಯಂತಾಗಿದೆ.
ದೀಪದ ಬುಡದಲ್ಲೇ ಕತ್ತಲು.. ಗಣಿನಾಡ ಸಂಸದರ ಕಚೇರಿ ಆವರಣವೇ ಈಗ ಕೆಸರು ಗದ್ದೆ - ಗಣಿನಾಡು ಬಳ್ಳಾರಿಯ ಲೋಕಸಭಾ ಸದಸ್ಯರಾದ ವೈ.ದೇವೇಂದ್ರಪ್ಪ ಕೇಂದ್ರ ಕಚೇರಿ
ನಿನ್ನೆ ಸುರಿದ ಧಾರಾಕಾರ ಮಳೆಗೆ ಬಳ್ಳಾರಿ ಸಂಸದ ವೈ.ದೇವೇಂದ್ರಪ್ಪ ಅವರ ಕಚೇರಿಗೆ ಮತ್ತು ಸ್ಪಂದನ ಕೇಂದ್ರಕ್ಕೆ ಹೋಗುವ ನೂರಾರು ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸಂಸದರ ಕಚೇರಿ ಮುಂದೆಯೇ ಕೆಸರುಗದ್ದೆಯಾದ ದಾರಿ
ಸಂಸದರ ಕಚೇರಿ ಮುಂದೆಯೇ ಕೆಸರುಗದ್ದೆಯಾದ ದಾರಿ
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದ ಮುಂಭಾಗದಲ್ಲಿ ನಿನ್ನೆ ಸುರಿದ ಧಾರಾಕಾರ ಮಳೆಗೆ ಬಳ್ಳಾರಿ ಸಂಸದ ವೈ.ದೇವೇಂದ್ರಪ್ಪ ಅವರ ಕಚೇರಿಗೆ ಮತ್ತು ಸ್ಪಂದನ ಕೇಂದ್ರಕ್ಕೆ ಹೋಗುವ ನೂರಾರು ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಒಟ್ಟಾರೆಯಾಗಿ ಸಂಸದ ಕಚೇರಿ ಮುಂದೆಯೇ ಮಳೆಯ ನೀರು ಶೇಖರಣೆಯಾಗಿ ಕೆಸರು ಗದ್ದೆಯಾಗಿ ನಿರ್ಮಾಣವಾಗಿದೆ. ಆದ್ರೆ ಸಾಮಾನ್ಯ ಜನರು ವಾಸಿಸುವ ದಾರಿಗಳ ಸ್ಥಿತಿಗತಿ ಏನಾಗಿರಬಹುದು? ಎನ್ನುವ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ.