ಹೊಸಪೇಟೆ: ವೆಂಕಟರಾವ್ ಘೋರ್ಪಡೆ ಅವರ ಸೋಲಿಗೆ ಕಾರಣ ಯಾರು? ಅವರ ಪರವಾಗಿ ಮಾಜಿ ಸಂಸದ ವಿ.ಎಸ್ ಉಗ್ರಪ್ಪನವರು ಯಾಕೆ ಪ್ರಚಾರ ಮಾಡಲಿಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೆಂಕಟರಾವ್ ಘೋರ್ಪಡೆ ಸೋಲಿಗೆ ಕೈ ಮುಖಂಡರೇ ಕಾರಣ: ಕಾರ್ಯಕರ್ತರ ಆಕ್ರೋಶ - ಸಂಸದ ವಿ.ಎಸ್ ಉಗ್ರಪ್ಪ
ಹೊಸಪೇಟೆಯ ಕಾಂಗ್ರೆಸ್ ಕಚೇರಿಯಲ್ಲಿ ಹಾಕಲಾಗಿದ್ದ, ಉಗ್ರಪ್ಪ ಮತ್ತು ಶಿವಯೋಗಿವಯರ ಭಾವಚಿತ್ರ ಇರುವ ಪ್ಲೆಕ್ಸ್ ಹರಿದು ಕಾರ್ಯಕರ್ತರು ಅಕ್ರೋಶ ವ್ಯಕ್ತ ಪಡಿಸಿದರು.
ಹೊಸಪೇಟೆಯ ಕಾಂಗ್ರೆಸ್ ಕಚೇರಿಯಲ್ಲಿ ಹಾಕಲಾಗಿದ್ದ, ಉಗ್ರಪ್ಪ ಮತ್ತು ಶಿವಯೋಗಿವಯರ ಭಾವಚಿತ್ರ ಇರುವ ಪ್ಲೆಕ್ಸ್ ಹರಿದು ಕಾರ್ಯಕರ್ತರು ಅಕ್ರೋಶ ವ್ಯಕ್ತ ಪಡಿಸಿದರು. ನಾಯಕರ ತಪ್ಪು ನಿರ್ಧಾರದಿಂದ ಕ್ಷೇತ್ರದಲ್ಲಿ ವೆಂಕಟರಾವ್ ಘೋರ್ಪಡೆ ಅವರು ಸೋಲುವಂತಾಯಿತು ಎಂದು ಅಸಮಾಧಾನವನ್ನು ಹೊರಹಾಕಿದರು.
ವೆಂಕಟರಾವ್ ಘೋರ್ಪಡೆ ಅವರಿಗೆ ವಿಜಯನಗರ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಇಷ್ಟವೇ ಇರಲಿಲ್ಲ. ಅವರಿಗೆ ಕಾಂಗ್ರೆಸ್ ಪಕ್ಷದ ಮುಖಂಡರು ಬಲವಂತವಾಗಿ ಟಿಕೆಟ್ ನೀಡಿದ್ದಾರೆ. ಅವರು ಸ್ಪರ್ಧೆ ಮಾಡುವಾಗ ತಮ್ಮ ಬಳಿ ಹಣ ಇಲ್ಲ ಎಂದು ತಿಳಿಸಿದ್ದರು. ಆ ಸಮಯದಲ್ಲಿ ಎಲ್ಲಾ ನಾಯಕರು ಮತ್ತು ಮುಖಂಡರು ಸೇರಿ ದುಡ್ಡು ಹಾಕುತ್ತೇವೆ ಎಂದು ಆಶ್ವಾಸನೆ ನೀಡಿದ್ದರು ಆದರೆ, ಅದ್ಯಾವುದನ್ನು ಮುಖಂಡರು ಮಾಡದೆ ಅಭ್ಯರ್ಥಿ ಸೋಲಿಗೆ ಕಾರಣರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.