ಕರ್ನಾಟಕ

karnataka

ETV Bharat / state

ಅರಣ್ಯ ಸಚಿವರಿಂದಲೇ ರಸ್ತೆ ತಡೆದು ಪ್ರತಿಭಟನೆ... ಯಾಕಾಗಿ? - ತಾಲೂಕಿನ ಬೈಪಾಸ್ ರಸ್ತೆಯ ಕಾಮಗಾರಿ ವಿಳಂಬ

ಇಂದು ಲಾರಿ ಮಾಲೀಕರ ಸಂಘದಿಂದ ನಡೆದ ಈ ಪ್ರತಿಭಟನೆಗೆ ಸಚಿವ ಆನಂದ್ ಸಿಂಗ್ ಬೆಂಬಲ ನೀಡಿದರು. ಬೈಪಾಸ್ ಮತ್ತು ಸಂಡೂರು ರಸ್ತೆಯ ಕಾಮಗಾರಿ ವರ್ಷಗಳು ಕಳೆದರೂ ಪೂರ್ಣಗೊಂಡಿಲ್ಲ. ರಸ್ತೆಯಲ್ಲಿ ವಾಹನ ಸವಾರ ಇಂದಿಗೂ ಪರದಾಡುತ್ತಿದ್ದಾನೆ. ಈ ಹಿನ್ನೆಲೆ ಬೇಗ ಕಾಮಗಾರಿ ಪೂರ್ಣ ಮಾಡಬೇಕೆಂದು ಆಗ್ರಹ ಮಾಡಿದ್ದಾರೆ.

Protest led by Forest Minister Anand Singh at Hospet
ಅರಣ್ಯ ಸಚಿವರಿಂದಲೇ ಪ್ರತಿಭಟನೆ

By

Published : Feb 25, 2020, 7:14 PM IST

ಹೊಸಪೇಟೆ: ತಾಲೂಕಿನ ಬೈಪಾಸ್ ರಸ್ತೆಯ ಕಾಮಗಾರಿ ವಿಳಂಬವಾಗುತ್ತಿದೆ ಎಂದು ಅರಣ್ಯ ಸಚಿವ ಆನಂದ ಸಿಂಗ್ ನೇತೃತ್ವದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗಿದೆ.

ಇಂದು ಲಾರಿ ಮಾಲೀಕರ ಸಂಘದ ವತಿಯಿಂದ ನಡೆದ ಈ ಪ್ರತಿಭಟನೆಗೆ ಸಚಿವ ಆನಂದ್ ಸಿಂಗ್ ಬೆಂಬಲ ನೀಡಿದರು. ಬೈಪಾಸ್ ಮತ್ತು ಸಂಡೂರು ರಸ್ತೆಯ ಕಾಮಗಾರಿ ವರ್ಷಗಳು ಕಳೆದರೂ ಪೂರ್ಣಗೊಂಡಿಲ್ಲ. ರಸ್ತೆಯಲ್ಲಿ ವಾಹನ ಸವಾರ ಇಂದಿಗೂ ಪರದಾಡುತ್ತಿದ್ದಾನೆ. ಈ ಹಿನ್ನೆಲೆ ಬೇಗ ಕಾಮಗಾರಿ ಪೂರ್ಣ ಮಾಡಬೇಕೆಂದು ಆಗ್ರಹ ಮಾಡಿದ್ದಾರೆ.

ಅರಣ್ಯ ಸಚಿವರಿಂದಲೇ ಪ್ರತಿಭಟನೆ

ಅಧಿಕಾರಿಗಳಿಗೆ ಎಷ್ಟು ಬಾರಿ ಹೇಳಿದರೂ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ರಸ್ತೆ ಕಾಮಗಾರಿ ಬೇಗ ಮುಗಿಸ್ತೀವಿ ಎಂದಿದ್ದ ಅಧಿಕಾಕಾರಿಗಳು ಈಗ ಉಲ್ಟಾ ಹೊಡೆದಿದ್ದಾರೆ‌. ಗ್ಯಾಮನ್ ಇಂಡಿಯಾ ಕಾಂಟ್ರ್ಯಾಕ್ಟ್ ರದ್ದಾಗಿದೆ ಅಂತಾ ಅಧಿಕಾರಿಗಳು ಹೇಳ್ತಿದ್ದಾರೆ. ಈ ಎಲ್ಲಾ ತೊಂದರೆಯಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಂಡು ಜನರಿಗೆ ಮುಕ್ತವಾಗಬೇಕು ಎಂದು ಸಚಿವರು ಹೇಳಿದರು.

ABOUT THE AUTHOR

...view details