ಕರ್ನಾಟಕ

karnataka

ETV Bharat / state

ಪೆರೋಲ್​ ಮೇಲೆ ಹೊರಬಂದು ಪರಾರಿಯಾದ ಕೈದಿ - ಬಳ್ಳಾರಿ ಜೈಲು

ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆಯ ನಿವಾಸಿಯಾದ ನಾಗೇಶ್​ ಎಂಬುವವ ಪೆರೋಲ್​ ಮೇಲೆ ಹೊರಬಂದು ಪರಾರಿಯಾಗಿದ್ದಾನೆ ಎಂದು ಜೈಲು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೈದಿ ಪರಾರಿ,  Prisoner escaped from Bellay Jail
ಕೈದಿ ಪರಾರಿ

By

Published : Feb 10, 2020, 4:59 AM IST

ಬಳ್ಳಾರಿ: ಪೆರೋಲ್ ಮೇಲೆ ಹೊರ ಬಂದಿದ್ದ ನಗರದ ಕೇಂದ್ರ ಕಾರಾಗೃಹದ ಸಜಾಬಂದಿ ಪರಾರಿಯಾಗಿದ್ದಾನೆ.

ಕೊರಚರ ನಾಗೇಶ (46) ಕಾರಾಗೃಹಕ್ಕೆ ವಾಪಸ್​ ತೆರಳದ ಹಿನ್ನೆಲೆಯಲ್ಲಿ ಗಾಂಧಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಗೇಶ್ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆಯ ನಿವಾಸಿಯಾಗಿದ್ದು, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಎಂದು ಜೈಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಕೈದಿ 6 ವರ್ಷಗಳಿಂದ ಕೇಂದ್ರ ಕಾರಾಗೃಹದಲ್ಲೇ ಸಜಾಬಂದಿಯಾಗಿದ್ದ ಈತನಿಗೆ 15 ದಿನಗಳ ಕಾಲ ಪೆರೋಲ್ ರಜೆ ನೀಡಲಾಗಿದ್ದು, ಫೆ.5 ರಂದು ಕಾರಾಗೃಹಕ್ಕೆ ವಾಪಸ್ ತೆರಳಬೇಕಿತ್ತು. ಆದರೆ, ಈತ ಮತ್ತೇ ವಾಪಸ್​ ಹೋಗದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details